Saturday, September 21, 2024
spot_img
More

    Latest Posts

    ಬಿಜೆಪಿ ಉಡುಪಿ ನಗರ ಶೈಕ್ಷಣಿಕ ಪ್ರಕೋಷ್ಠಗಳ ಸಂಚಾಲಕರಾಗಿ ಹರೀಶ್ ಕಲ್ಮಾಡಿ ಆಯ್ಕೆ

    ಉಡುಪಿ: ಭಾರತೀಯ ಜನತಾ ಪಕ್ಷದ ಉಡುಪಿ ನಗರ ಶಿಕ್ಷಣ ಸಂಸ್ಥೆ ಹಾಗೂ ಶೈಕ್ಷಣಿಕ ಪ್ರಕೋಷ್ಠಗಳ ಸಂಚಾಲಕರಾಗಿ ಹರೀಶ್ ಜಿ. ಕಲ್ಮಾಡಿ ಅವರು ಆಯ್ಕೆ ಆಗಿದ್ದಾರೆ.

    ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಇವರು, ಹಲವಾರು ಸಮಾಜ ಸೇವಾ ಸಂಸ್ಥೆಗಳಲ್ಲಿ ಸೇವೆಗಳನ್ನು ಸಲ್ಲಿಸಿದ್ದಾರೆ ಹಾಗೂ ಸಲ್ಲಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಈಗ ಈ ಮೂಲಕ ಮತ್ತಷ್ಟು ಮನ್ನಣೆ ಸಿಕ್ಕಂತಾಗಿದೆ.

    ಶೈಕ್ಷಣಿಕ ಮಾತ್ರವಲ್ಲದೆ ಧಾರ್ಮಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿರುವ ಹರೀಶ್ ಕಲ್ಮಾಡಿ ಅವರು, ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ಭಾಗವಹಿಸಿದವರು.

    ಭಾರತೀಯ ಜನತಾ ಪಕ್ಷದ ಉಡುಪಿ ನಗರ ಶಿಕ್ಷಣ ಸಂಸ್ಥೆ ಹಾಗೂ ಶೈಕ್ಷಣಿಕ ಪ್ರಕೋಷ್ಠಗಳ ಸಂಚಾಲಕರಾಗಿ ಆಯ್ಕೆ ಆಗಿರುವ ಇವರಿಂದ ಸಮಾಜಕ್ಕೆ ಮತ್ತಷ್ಟು ಅನುಕೂಲವಾಗಲಿ ಹಾಗೂ ಇವರಿಗೆ ಇನ್ನಷ್ಟು ಉನ್ನತ ಸ್ಥಾನಮಾನ-ಜವಾಬ್ದಾರಿಗಳು ಒಲಿದು ಬರಲಿ ಎಂಬುದಾಗಿ ಗ್ಲೋಬಲ್ ಗಾಣಿಗದ ಹಾರೈಕೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!