Thursday, May 2, 2024
spot_img
More

    Latest Posts

    ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಬೆಂಗಳೂರು: ದೇಶದಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಮತ ಎಣಿಕೆ ನಿನ್ನೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ.  

    ಈ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಗಾಣಿಗ ಅಭ್ಯರ್ಥಿಗಳು ಗೆದ್ದಿರುವುದು ಸಂತಸದ ಸಂಗತಿ. ಅದರಲ್ಲೂ ಛತ್ತೀಸ್‌ಗಢದಲ್ಲಿ ಬರೋಬ್ಬರಿ ಒಂದು ಡಜನ್‌ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.  

    ಛತ್ತೀಸ್‌ಗಢದಲ್ಲಿ ಗಾಣಿಗ ಸಮುದಾಯದ 12 ಮಂದಿ ಗೆದ್ದಿದ್ದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ತಲಾ ಒಬ್ಬರು ಗೆದ್ದಿದ್ದಾರೆ. ಗೆದ್ದಿರುವ ಎಲ್ಲ ಅಭ್ಯರ್ಥಿಗಳಿಗೆ ಗ್ಲೋಬಲ್‌ ಗಾಣಿಗ.ಕಾಂ ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸುತ್ತಿದೆ.

    ಛತ್ತೀಸ್‌ಗಢದಲ್ಲಿ ಗೆದ್ದವರ ವಿವರ

    • ಅರುಣ್‌ ಸಾಹು: ಲಾರ್ಮಿ ಕ್ಷೇತ್ರ, ಬಿಜೆಪಿ.
    • ಮೋತಿಲಾಲ್‌ ಸಾಹು: ರಾಯ್ಪುರ ಗ್ರಾಮೀಣ, ಬಿಜೆಪಿ.
    • ಇಂದ್ರಕುಮಾರ್‌ ಸಾಹು: ಅಭಂಪುರ್‌, ಬಿಜೆಪಿ
    • ರೋಹಿತ್‌ ಸಾಹು: ರಜೀಂ, ಬಿಜೆಪಿ.
    • ಈಶ್ವರ್‌ ಸಾಹು: ಸಜಾ, ಬಿಜೆಪಿ.
    • ದೀಪೇಶ್‌ ಸಾಹು: ಬೆಮೆತ್ರಾ, ಬಿಜೆಪಿ.
    • ಓಂಕಾರ್‌ಲಾಲ್‌ ಸಾಹು: ಧಮ್ತರಿ, ಬಿಜೆಪಿ.
    • ಬಲೇಶ್ವರ್‌ ಸಾಹು: ಜಯ್ಪುರ, ಕಾಂಗ್ರೆಸ್.
    • ಸಂದೀಪ್‌ ಸಾಹು: ಕಸ್ದೋಳ್‌, ಕಾಂಗ್ರೆಸ್‌.
    • ಇಂದ್ರ ಸಾಹು: ಭಟಪರ, ಕಾಂಗ್ರೆಸ್‌.
    • ಜಲೇಶ್ವರ್‌ ಸಾಹು: ಡೊಂಗರ್‌ಗಾಂವ್‌, ಕಾಂಗ್ರೆಸ್‌.
    • ಭೋಳರಾಂ ಸಾಹು: ಖುಜಿ, ಕಾಂಗ್ರೆಸ್‌  

    ರಾಜಸ್ಥಾನ: ಭೀಮ್‌ರಾಜ್‌ ಭಾಟಿ- ಪಲಿ ಮರ್ವರ್‌, ಕಾಂಗ್ರೆಸ್‌.

    ಮಧ್ಯಪ್ರದೇಶ: ರಾಮ್‌ನಿವಾಸ್‌ ಸಾಹು- ಸಿಂಗ್ರೌಲಿ, ಬಿಜೆಪಿ.  

    ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಗಾಣಿಗ ಸಮುದಾಯ ಈ ಎಲ್ಲ ಅಭ್ಯರ್ಥಿಗಳಿಗೆ ಭಾರತೀಯ ಸಾಹು ಶ್ರೇಷ್ಠಿ ಮಹಾಸಂಘ (ಸಾಹು ಚೌಪಾಲ್‌) ಸಂಸ್ಥಾಪಕ ಉಪಾಧ್ಯಕ್ಷ ಕೃಷ್ಣಕುಮಾರ್‌ ಸಾಹು ಅಭಿನಂದನೆಗಳನ್ನು ತಿಳಿಸಿದ್ದಾರೆ.

    ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!