ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಎಂಆರ್ಪಿಎಲ್ ಆಯೋಜಿಸಿದ್ದ ಸೀರೆ ಓಟ (Saree Run)ದ ಮೂರನೇ ಆವೃತ್ತಿಯಲ್ಲಿ ಬಿ. ರೋಹಿಣಿ ತೃತೀಯ ಬಹುಮಾನ ಗಳಿಸಿದ್ದಾರೆ.
ಮಂಗಳೂರಿನಲ್ಲಿ ಡಿ.17ರಂದು ನಡೆದು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವ ಈ ಸೀರೆ ಓಟದಲ್ಲಿ ಮಂಗಳೂರು ಪಚ್ಚನಾಡಿಯ ಬಿಕಾಂ ವಿದ್ಯಾರ್ಥಿನಿ ಸ್ವರ್ಣ ಪ್ರಥಮ, ಗದಗ ಮೂಲದ 9ನೇ ತರಗತಿಯ ವಿದ್ಯಾರ್ಥಿನಿ ಕಾವೇರಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಗೃಹಿಣಿ ರೋಹಿಣಿ ಈ ಇಬ್ಬರು ವಿದ್ಯಾರ್ಥಿನಿಯರಿಗೆ ಪೈಪೋಟಿ ಒಡ್ಡಿ ಮೂರು ಕಿ.ಮೀ. ಸೀರೆ ಓಟದ ಈ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.
ಬಂಟ್ವಾಳ ತಾಲೂಕು ಪೆರ್ನೆಯ ಚೆನ್ನಪ್ಪ ಸಫಲ್ಯ ಅವರ ಪುತ್ರಿ, ಬರಿಮಾರು ಅಶೋಕ್ ಕುಮಾರ್ ಅವರ ಪತ್ನಿ ಬಿ. ರೋಹಿಣಿ ವೃತ್ತಿಯಿಂದ ದೈಹಿಕ ಶಿಕ್ಷಕಿ. ಶಾಲಾ ದಿನಗಳಿಂದಲೂ ಇವರು ಆಟೋಟಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಕಾಲೇಜಿನಲ್ಲಿದ್ದಾಗ ಅಥ್ಲೀಟ್ ಆಗಿದ್ದಾಗ ಕ್ರಾಸ್ ಕಂಟ್ರಿ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಸದ್ಯ ಇವರು ಮೊಂಟೆಪದವು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರೇಡ್ 1 ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪುತ್ರಿಯರೂ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ.
ರೋಹಿಣಿಯವರ ಪುತ್ರಿ ಅನರ್ಘ್ಯ ದೆಹಲಿಯಲ್ಲಿ ನಡೆಯುವ 14 ವರ್ಷದ ಒಳಗಿನ ಈಜು ಸ್ಫರ್ದೆಯಲ್ಲಿ ಎಸ್ಜಿಎಫ್ ಸ್ಫರ್ಧೆಗೆ ಆಯ್ಕೆ ಆಗಿದ್ದಾರೆ. ಇನ್ನೊಬ್ಬ ಪುತ್ರಿ ಅನನ್ಯ ಕಳೆದ ವರ್ಷ ನಡೆದ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ 9 ವರ್ಷದ ಹುಡುಗಿಯರ ಈಜು ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು
ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ