ಬೆಂಗಳೂರು: ಇತ್ತೀಚೆಗೆ ಛತ್ತೀಸ್ಗಢದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಾಣಿಗ (ಸಾಹು) ಸಮುದಾಯದ 12 ಮಂದಿ ಗೆದ್ದು ಶಾಸಕರಾಗಿದ್ದು, ಆ ಪೈಕಿ ಅರುಣ್ ಸಾಹು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಒಲಿದಿದೆ.
ಛತ್ತೀಸ್ಗಢ ಮುಖ್ಯಮಂತ್ರಿ ಆಗಿ ವಿಷ್ಣುದೇವ ಸಾಯಿ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ ಉಪ ಮುಖ್ಯಮಂತ್ರಿಗಳಾಗಿ ಅರುಣ್ ಸಾಹು ಹಾಗೂ ವಿಜಯ್ ಶರ್ಮಾ ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಯಾರಿವರು ಅರುಣ್ ಸಾಹು?
ಅರುಣ್ ಸಾಹು ಅವರು ಸಾಹು(ತೇಲಿ) ಸಮುದಾಯದವರಾಗಿದ್ದು, ಇವರು ಆರ್ಎಸ್ಎಸ್ ಹಾಗೂ ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದ್ದರು. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ, ಬಳಿಕ 2019ರಲ್ಲಿ ಬಿಲಾಸ್ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಅಟಲ್ ಶ್ರೀವಾಸ್ತವ ಅವರನ್ನು 1.4 ಲಕ್ಷ ಮತಗಳಿಂದ ಮಣಿಸಿ ಸಂಸದರಾದರು.
ನಂತರ ಇವರು 2022ರಲ್ಲಿ ಛತ್ತೀಸ್ಗಢ ರಾಜ್ಯ ಬಿಜೆಪಿ ಅಧ್ಯಕ್ಷರಾದರು. ವೃತ್ತಿಯಿಂದ ವಕೀಲರಾಗಿರುವ ಅರುಣ್ ಅವರ ಹುಟ್ಟೂರು ಮುಂಗೇಲಿ. ಇವರು ಆರ್ಎಸ್ಎಸ್ ಮುಖಂಡ ಅಭಿರಾಂ ಸಾಹು ಅವರ ಪುತ್ರ. ಅರುಣ್ ಛತ್ತೀಸ್ಗಢ ಹೈಕೋರ್ಟ್ನಲ್ಲಿ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿದ್ದರು. ಈ ವಿಧಾನಸಭೆ ಚುನಾವಣೆಯಲ್ಲಿ ಲೊರ್ಮಿ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ನ ಥಾಣೇಶ್ವರ್ ಸಾಹು ಅವರ ವಿರುದ್ಧ 45 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು
ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ
ಸಂಬಂಧಿತ ಸುದ್ದಿ: ಪಿಎಂ-ವಿಶ್ವಕರ್ಮ ಯೋಜನೆಯಲ್ಲಿ ಗಾಣಿಗರನ್ನೂ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿ