ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ತನ್ನ ಎಸ್ಜಿಇಸಿಟಿ ಅಕಾಡೆಮಿ ಮೂಲಕ ತ್ರಿಶೂಲ ಟ್ರಸ್ಟ್ ಸಹಯೋಗದಲ್ಲಿ ʼಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣʼ ಎಂಬ ವಿಚಾರಸಂಕಿರಣವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಎಸ್ಜಿಇಸಿಟಿ ಕಚೇರಿಯಲ್ಲಿ ಜ.13ರ ಶನಿವಾರ ಬೆಳಗ್ಗೆ 11ಕ್ಕೆ ಈ ವಿಚಾರಸಂಕಿರಣ ನಡೆಯಲಿದೆ. ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಮಂಗಳಾ ನಾರಾಯಣ್ ಈ ವಿಚಾರಸಂಕಿರಣ ಉದ್ಘಾಟಿಸಲಿದ್ದಾರೆ.
ಎಸ್ಜಿಇಸಿಟಿ ಅಕಾಡೆಮಿ ಅಧ್ಯಕ್ಷ ಆರ್.ನಾಗರಾಜ್ ಶೆಟ್ಟಿ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮ್ಯಾನೇಜಿಂಗ್ ಟ್ರಸ್ಟೀ ಬಿ.ಕೆ.ಬಸವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ʼಕೌಶಲಾಭಿವೃದ್ಧಿ ಮೂಲಕ ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಆರೋಗ್ಯ: ಸಮಸ್ಯೆ ಮತ್ತು ಪರಿಹಾರಗಳುʼ ಎಂಬ ವಿಷಯವಾಗಿ ವಿಚಾರಸಂಕಿರಣ ನಡೆಯಲಿದೆ. ಅಲ್ಲದೆ ʼಕ್ರಿಯೇಟಿವ್ ಆರ್ಟ್ಸ್ ಮತ್ತು ಪೇಂಟಿಂಗ್ ಕ್ಲಾಸ್ʼಗೂ ಇದೇ ವೇಳೆ ಚಾಲನೆ ನೀಡಲಾಗುವುದು.
ಶುಭಾ ರಾಜಶೇಖರ್ ಅವರು ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಚಾರ ಮಂಡಿಸಲಿದ್ದು, ಮೆನ್ಸ್ಟ್ರುವಲ್ ಕಪ್ ವಿತರಣೆ ಕೂಡ ಮಾಡಲಿದ್ದಾರೆ. ತ್ರಿಶೂಲ ಟ್ರಸ್ಟ್ ಅಧ್ಯಕ್ಷ ಬಿ.ಸಿ.ರಾಜಶೇಖರ್ ತರಬೇತಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆ: 63623 63044
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್ ಪದವಿ
ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ