ಬೆಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವಕ್ಕೆ ಮಿಜಾರು- ಎಡಪದವು ಗಾಣಿಗರ ಯಾನೆ ಸಫಲಿಗರ ಸೇವಾ ಸಂಘದ ವ್ಯಾಪ್ತಿಯ ಸಮಾಜಬಾಂಧವರು ಧನಸಹಾಯ ಮಾಡಿದ್ದಾರೆ.
ಈ ಸಂಘದ ವ್ಯಾಪ್ತಿಯ ಸಮಾಜದ ಮನೆಯವರಿಂದ 64,377 ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಸಂಘದ ಅಧ್ಯಕ್ಷ ಭಾಸ್ಕರ್ ಎಸ್. ಎಡಪದವು, ಜೊತೆ ಕಾರ್ಯದರ್ಶಿ ಎಂ. ಪ್ರಸಾದ್ ಕುಮಾರ್ ಹಾಗೂ ಅವರ ಪತ್ನಿ ಪ್ರಮೀಳಾ ಅವರ ಮುಖಾಂತರ ದೇವಸ್ಥಾನಕ್ಕೆ ನೀಡಲಾಯಿತು.
ಭಾಸ್ಕರ್, ಪ್ರಸಾದ್, ಪ್ರಮೀಳಾ ಅವರು ಈ ಮೊತ್ತವನ್ನು ಧರ್ಮರಸರ ಕ್ಷೇತ್ರದ ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಎಂ. ರಾಮದಾಸ್ ಸೋಮೇಶ್ವರ, ವ್ಯವಸ್ಥಾಪನಾ ಸಮಿತಿಯ ಯು. ರಮೇಶ್ ಅವರಿಗೆ ಹಸ್ತಾಂತರಿಸುವ ಮೂಲಕ ಶ್ರೀಕ್ಷೇತ್ರಕ್ಕೆ ನೀಡಿದರು.
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಕುರಿತು ಸಂಶೋಧನಾ ಪ್ರಬಂಧ; ಮೇಘನಾಗೆ ಡಾಕ್ಟರೇಟ್ ಪದವಿ
ಸಂಬಂಧಿತ ಸುದ್ದಿ: ಶ್ರೀಜ್ಯೋತಿ ಸಮುದಾಯ ಭವನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿ ಧನಸಹಾಯ