ಬೆಂಗಳೂರು: ಆಧುನಿಕ ಜೀವನಶೈಲಿಯಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾದ ಬಳಿಕ ಗಾಣದಿಂದ ತಯಾರಿಸಿದ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ.
ಯತೀಶ್ ಗಾಣಿಗ ಎಂಬವರು ದಿಯಾ ಹೋಮ್ಕಾರ್ಟ್ ಸರ್ವಿಸ್ ಪ್ರೈ.ಲಿ. ಎಂಬ ಸಂಸ್ಥೆ ಸ್ಥಾಪಿಸಿ ಗಾಣದಿಂದ ತಯಾರಿಸಿದ ಕಡಲೆಕಾಯಿ ಎಣ್ಣೆಯನ್ನು ಮನೆ ಬಾಗಿಲಿಗೇ ಕಳುಹಿಸಿಕೊಡುವ ವ್ಯವಸ್ಥೆ ಆರಂಭಿಸಿದ್ದಾರೆ. ಗಾಣಿಗರೇ ಗಾಣದಲ್ಲಿ ತಯಾರಿಸಿದ ಈ ಎಣ್ಣೆಯ ಹೋಮ್ ಡೆಲಿವರಿ ಡಿ. 3ರಿಂದ ಆರಂಭಿಸಲಾಗಿದೆ.
ಸದ್ಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಇರುವವರಿಗೆ ಮಾತ್ರ ಇದನ್ನು ಮನೆ ಬಾಗಿಲಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಲೀಟರ್ಗೆ 260 ರೂ. ಬೆಲೆಯ ಈ ಕಡಲೆಕಾಯಿ ಎಣ್ಣೆ ಬೇಕಾದವರು 8792210666 ಸಂಪರ್ಕಿಸಬಹುದು.
ಮುಂದೆ ಕರ್ನಾಟಕದ ಇತರ ಭಾಗಗಳಿಗೂ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಟೀಮ್ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ
ಸಂಬಂಧಿತ ಸುದ್ದಿ: ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ
ಸಂಬಂಧಿತ ಸುದ್ದಿ: ರಾಷ್ಟ್ರೀಯ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ವಿಶ್ವನಾಥ್ಗೆ ಬೆಳ್ಳಿ ಪದಕ