Thursday, May 2, 2024
spot_img
More

    Latest Posts

    ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ

    ಬೆಂಗಳೂರು: ಸಮಸ್ತ ಗಾಣಿಗ ಸಮುದಾಯಕ್ಕೆ ಒಂದು ಸಮಗ್ರ ಹಾಗೂ ಜಾಗತಿಕ ವೇದಿಕೆಯನ್ನು ಕಲ್ಪಿಸಬೇಕು ಎಂಬ ಮಹತ್ವದ ಕನಸಿನೊಂದಿಗೆ ಆರಂಭವಾಗಿದ್ದೇ ಗ್ಲೋಬಲ್‌ ಗಾಣಿಗ.ಕಾಮ್.‌ ಈ ಅಂತರಜಾಲ ತಾಣ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿವೆ.

    ಜಗತ್ತಿನಾದ್ಯಂತ ಇರುವ ಗಾಣಿಗ ಸಮುದಾಯದವರನ್ನು ಒಂದೇ ವೇದಿಕೆಯಡಿ ತಂದು ಸಮಾಜವನ್ನು ಸಂಘಟಿತವಾಗಿಸಬೇಕು ಎಂಬ ಉದ್ದೇಶದದಿಂದ ಆರಂಭಗೊಂಡಿರುವ ಈ ತಾಣ ಆ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ಕೆಲಸಗಳನ್ನು ಮಾಡಿದೆ.

    ಗಾಣದಿಂದ ಎಣ್ಣೆ ತೆಗೆಯುವುದು ಕುಲಕಸುಬಾಗಿದ್ದರಿಂದ ನಮ್ಮ ಜನಾಂಗವು ಗಾಣಿಗ ಎಂದು ಕರೆಯಲ್ಪಡುತ್ತಿದೆ. ಆದರೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಗಾಣಿಗರು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದಾರೆ. ಆ ಪೈಕಿ ಮೋದಿ, ತೇಲಿ, ಸಾಹು, ಗಾಂಡ್ಲ, ವಣಿಯರ್‌.. ಹೀಗೆ ನಮ್ಮ ಸಮುದಾಯಕ್ಕೆ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿದೆ. ಕರ್ನಾಟಕದಲ್ಲೇ ಗಾಣಿಗರಲ್ಲಿ ಸೋಮಕ್ಷತ್ರಿಯ, ಜ್ಯೋತಿನಗರ, ಜ್ಯೋತಿಫಣ, ಸಫಲಿಗ, ಸಜ್ಜನ್‌ ಎಂಬಿತ್ಯಾದಿ ಬೇರೆ ಬೇರೆ ಪಂಗಡಗಳೂ ಇವೆ.

    ಹೀಗಾಗಿ ಪ್ರಪಂಚದಾದ್ಯಂತ ಇರುವ ಈ ಎಲ್ಲ ಗಾಣಿಗರನ್ನು ಜಾಗತಿಕವಾಗಿ ಒಂದೇ ವೇದಿಕೆಯಲ್ಲಿ ತರಬೇಕು, ಗಾಣಿಗ ಸಮಾಜಕ್ಕೆ ಒಂದು ಪ್ರಬಲವಾದ ಮಾಧ್ಯಮ ಶಕ್ತಿಯನ್ನು ಕೊಡಬೇಕು, ಆ ಮೂಲಕ ಸಮಾಜವನ್ನು ಸಮರ್ಥವಾಗಿ ಸಂಘಟಿಸಲು ಪ್ರಮುಖ ಕೊಂಡಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಗ್ಲೋಬಲ್‌ ಗಾಣಿಗ.ಕಾಂ ಎಂಬ ಈ ಅಂತರಜಾಲ ತಾಣವನ್ನು ಹುಟ್ಟುಹಾಕಲಾಗಿದೆ.

    ಇಷ್ಟು ದಿನ ಬರೀ ಸುದ್ದಿಗೆ ಸೀಮಿತವಾಗಿದ್ದ ಈ ತಾಣ ಇನ್ನು ಮುಂದೆ ಸಮಾಜದವರ ಸಂತೋಷ ಹಂಚಿಕೊಳ್ಳಲಿಕ್ಕೂ ವೇದಿಕೆ ಒದಗಿಸಲಿದೆ. ಸಮಾಜಬಾಂಧವರು ತಮ್ಮ ಪ್ರೀತಿಪಾತ್ರರ ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಶುಭ ಸಮಾರಂಭ, ಯಶಸ್ಸು-ಸಾಧನೆ ಇತ್ಯಾದಿ ಕುರಿತು ಗ್ಲೋಬಲ್‌ ಗಾಣಿಗದಲ್ಲಿ ಜಾಹೀರಾತು ನೀಡುವ ಮೂಲಕ ಶುಭಾಶಯಗಳನ್ನು ಕೋರಬಹುದು.

    ʼದಿನದ ಶುಭಾಶಯʼ ಎಂಬ ಹೊಸ ಕಲ್ಪನೆಯೊಂದಿಗೆ ಈ ವಿಶೇಷ ಜಾಹೀರಾತು ಅವಕಾಶವನ್ನು ಮಕರ ಸಂಕ್ರಮಣ ದಿನವಾದ ಈ ಜ.15ರಂದು ಆರಂಭಿಸಲಾಗಿದೆ. ಉದಾಹರಣೆಗೆ.. ಜ. 18ರಂದು ಸಮಾಜಬಾಂಧವರ ಪ್ರೀತಿಪಾತ್ರರಾದ ಯಾರದ್ದಾದರೂ ಜನ್ಮದಿನವಿದ್ದರೆ ಅಂದೇ ಗ್ಲೋಬಲ್‌ ಗಾಣಿಗದಲ್ಲಿ ಪ್ರಕಟವಾಗುವ ರೀತಿಯಲ್ಲಿ ಜನ್ಮದಿನದ ಶುಭಾಶಯದ ಜಾಹೀರಾತು ನೀಡಬಹುದು. ಅದನ್ನು ಗ್ಲೋಬಲ್‌ ಗಾಣಿಗ ತಾಣದಲ್ಲಿ ಪ್ರಕಟಿಸುವ ಜೊತೆಗೆ ಗ್ಲೋಬಲ್‌ ಗಾಣಿಗದ ಎಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಪೋಸ್ಟ್‌ ಮಾಡಲಾಗುತ್ತದೆ. ಈ ಮೂಲಕ ಸಮಾಜಬಾಂಧವರು ತಮ್ಮ ಪ್ರೀತಿಪಾತ್ರರ ವಿಶೇಷ ದಿನಗಳನ್ನು ಸ್ಮರಣೀಯ ಹಾಗೂ ಸಂತಸಮಯ ಆಗಿಸಬಹುದು.

    ಇದು ಜಾಹೀರಾತು ಆಗಿರುವುದರಿಂದ ಇಂಥದ್ದೊಂದು ಶುಭಾಶಯ ಕೋರುವ ಆಸಕ್ತ ಸಮಾಜಬಾಂಧವರು ಇದಕ್ಕಾಗಿ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮೂಲಕ ಅವರು ತಮ್ಮ ಸಮಾಜದ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ತಾಣವಾದ ಗ್ಲೋಬಲ್‌ ಗಾಣಿಗಕ್ಕೂ ಆರ್ಥಿಕ ಶಕ್ತಿ ತುಂಬಿದಂತಾಗುತ್ತದೆ. ಇದರಿಂದ ಗ್ಲೋಬಲ್‌ ಗಾಣಿಗ ಟೀಮ್‌ ಕೂಡ ಸಮಾಜದ ಅಭ್ಯುದಯಕ್ಕೆ ಸಂಬಂಧಿತ ಇನ್ನೂ ಅನೇಕ ಕಲ್ಪನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.

    ಬನ್ನಿ.. ನಿಮ್ಮ ಪ್ರೀತಿಪಾತ್ರರ ವಿಶೇಷ ದಿನಕ್ಕಾಗಿ ಗ್ಲೋಬಲ್‌ ಗಾಣಿಗದಲ್ಲಿ ಜಾಹೀರಾತು ನೀಡಿ ಶುಭಾಶಯ ಕೋರುವ ಮೂಲಕ ಅವರ ದಿನವನ್ನು ಇನ್ನಷ್ಟು ವಿಶೇಷವಾಗಿಸಿ, ಅವರ ಸಂತೋಷ-ಸಂಭ್ರಮವನ್ನು ಹೆಚ್ಚಿಸಿ, ಸ್ಮರಣೀಯಗೊಳಿಸಿ.

    ದಿನದ ಶುಭಾಶಯ ಜಾಹೀರಾತಿನ ಮಾದರಿ

    ಜಾಹೀರಾತು ನಿಬಂಧನೆಗಳು

    • ಜಾಹೀರಾತು ನೀಡುವವರು ಜಾಹೀರಾತು ಪ್ರಕಟವಾಗಬೇಕಾದ ದಿನಾಂಕಕ್ಕೆ ಮೂರು ದಿನ (72 ಗಂಟೆ) ಮೊದಲೇ ಸಂಬಂಧಿತ ಫೋಟೋ-ವಿವರ ಕಳುಹಿಸಿಕೊಡಬೇಕು.
    • ಜಾಹೀರಾತು ಕೋರಿಕೆಯನ್ನು ಸೂಕ್ತ ಫೋಟೋ-ವಿವರಗಳ ಜೊತೆಗೆ [email protected] ಐಡಿಗೆ ಇ-ಮೇಲ್‌ ಮಾಡಬೇಕು. ಇ-ಮೇಲ್‌ ಕಳಿಸಿದವರ ಮೊಬೈಲ್‌ ಫೋನ್‌ ನಂಬರ್‌ ಅದರಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು.
    • ಯಾರ ಹೆಸರಿನಲ್ಲಿ, ಯಾವ ಉದ್ದೇಶಕ್ಕೆ, ಯಾರಿಂದ ಶುಭಾಶಯ ಹಾಗೂ ಸಂಬಂಧಿತ ಜಾಹೀರಾತು ಯಾವ ದಿನ ಪ್ರಕಟವಾಗಬೇಕು ಎನ್ನುವುದನ್ನು ಇ-ಮೇಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು.
    • ಜಾಹೀರಾತು ಪ್ರಕಟವಾಗಬೇಕಾದ ನಿಗದಿತ ದಿನಾಂಕದಂದು ಬೆಳಗ್ಗೆ 8 ಗಂಟೆಗೆ ಅದು ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಆಗುತ್ತದೆ. ಜೊತೆಗೆ ಗ್ಲೋಬಲ್‌ ಗಾಣಿಗದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಎಕ್ಸ್‌, ಕೂ, ಟೆಲಿಗ್ರಾಂ-ವಾಟ್ಸ್ಯಾಪ್‌ ಚಾನೆಲ್‌ಗಳಲ್ಲೂ ಪೋಸ್ಟ್‌ ಮಾಡಲಾಗುತ್ತದೆ.
    • ಜಾಹೀರಾತು ಶುಲ್ಕವಾದ 2 ಸಾವಿರ ರೂ. ಮುಂಚಿತವಾಗಿ ಪಾವತಿಸಬೇಕು. ಹಣ ಪಾವತಿಸಬೇಕಾದ ಖಾತೆಯ ವಿವರ ಜಾಹೀರಾತು ಕೋರಿಕೆಯ ಇ-ಮೇಲ್‌ಗೆ ರಿಪ್ಲೈನಲ್ಲಿ ತಿಳಿಸಲಾಗುವುದು. ಶುಲ್ಕ ಪಾವತಿಸಿದ ಬಳಿಕವಷ್ಟೇ ಜಾಹೀರಾತು ಬುಕಿಂಗ್‌ ಖಚಿತವಾಗಲಿದೆ.
    • ಜಾಹೀರಾತಿಗಾಗಿ ಒಮ್ಮೆ ಬುಕ್‌ ಮಾಡಿದ ನಂತರ ಕಾರಣಾಂತರಗಳಿಂದ ಅದನ್ನು ರದ್ದು ಮಾಡುವುದಿದ್ದರೆ ಜಾಹೀರಾತು ಪ್ರಕಟವಾಗಬೇಕಾದ ದಿನಾಂಕದ ಬೆಳಗಿನ 8 ಗಂಟೆಗೆ ಸರಿಯಾಗಿ 48 ಗಂಟೆಗಳ ಮೊದಲು ತಿಳಿಸಬೇಕಾಗುತ್ತದೆ. ಆಗ ಜಾಹೀರಾತು ರದ್ದುಗೊಳಿಸಿ, ಶುಲ್ಕದ ಶೇ.50 ಭಾಗದ ಮೊತ್ತವನ್ನು ಹಣ ಪಾವತಿಸಿದ್ದ ಖಾತೆಗೇ ಮರಳಿಸಲಾಗುವುದು. 48 ಗಂಟೆಗಳ ಮೊದಲೇ ತಿಳಿಸದೆ ರದ್ದು ಮಾಡಬೇಕು ಎಂದರೆ ಶುಲ್ಕದ ಮೊತ್ತದಲ್ಲಿ ಯಾವುದೇ ಹಿಂಪಾವತಿ ಇರುವುದಿಲ್ಲ.
    • ಯಾವುದೇ ಜಾಹೀರಾತು ಪ್ರಕಟಿಸುವ ಅಥವಾ ಪ್ರಕಟಿಸದಿರುವ ಹಕ್ಕು ಗ್ಲೋಬಲ್‌ ಗಾಣಿಗದ ವಿವೇಚನೆಗೆ ಒಳಪಟ್ಟಿರುತ್ತದೆ.

    ಮೊದಲ 25 ಮಂದಿಗೆ ಶೇ.50 ರಿಯಾಯಿತಿ

    ಮಕರ ಸಂಕ್ರಮಣ ಹಾಗೂ ಆರಂಭಿಕ ಕೊಡುಗೆಯಾಗಿ “ದಿನದ ಶುಭಾಶಯ” ಎಂಬ ಈ ಜಾಹೀರಾತಿಗೆ ಹೆಸರು ನೋಂದಾಯಿಸಿಕೊಳ್ಳುವ ಮೊದಲ 25 ಮಂದಿಗೆ ಜಾಹೀರಾತು ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲಾಗುವುದು. ಹೀಗೆ ನೋಂದಾಯಿಸಿಕೊಂಡವರಿಗೆ ಜಾಹೀರಾತು ನೀಡಲು ಬುಕಿಂಗ್‌ ಖಚಿತವಾದ ದಿನದಿಂದ 3 ತಿಂಗಳ (90 ದಿನ) ವರೆಗೆ ಕಾಲಾವಕಾಶ ಇರುತ್ತದೆ. ಅಷ್ಟರೊಳಗೆ ಜಾಹೀರಾತು ನೀಡದಿದ್ದರೆ ಬುಕಿಂಗ್‌ ರದ್ದಾಗುತ್ತದೆ ಹಾಗೂ ಶುಲ್ಕ ಹಿಂಪಾವತಿ ಇರುವುದಿಲ್ಲ.

    ಶೇ. 50 ರಿಯಾಯಿತಿ ಪಡೆಯಲು ಆಸಕ್ತಿ ಇರುವವರು ತಮ್ಮ ಹೆಸರು, ಮೊಬೈಲ್‌ಫೋನ್‌ ನಂಬರ್‌, ಜಾಹೀರಾತು ವಿವರ, ಪ್ರಕಟವಾಗಬೇಕಾದ ದಿನಾಂಕದ ಮಾಹಿತಿ [email protected] ಗೆ ಆದಷ್ಟೂ ಬೇಗ ಇ-ಮೇಲ್‌ ಮಾಡಬೇಕು. ಈ ಮೇಲ್‌ಗೆ ಪ್ರತಿಯಾಗಿ ಕಳಿಸುವ ರಿಪ್ಲೈ ಮೆಸೇಜ್‌ನಲ್ಲಿ 25 ಮಂದಿಯಲ್ಲಿ ನೀವು ಎಷ್ಟನೆಯವರು ಎಂಬ ಮಾಹಿತಿ ತಿಳಿಸಲಾಗುವುದು. ಬಳಿಕ ತಾವು 24 ಗಂಟೆಯೊಳಗೆ ಶೇ. 50 ಶುಲ್ಕ (1000 ರೂ.) ನಾವು ಸೂಚಿಸಿದ ಖಾತೆಗೆ ಜಮಾ ಮಾಡಿ ಅದರ ರಶೀದಿ ಇ-ಮೇಲ್‌ ಮಾಡಬೇಕು. ಅದಕ್ಕೆ ಪ್ರತಿಯಾಗಿ ಇನ್ನೊಂದು ಕನ್‌ಫರ್ಮೇಷನ್‌ ಇ-ಮೇಲ್‌ ಕಳಿಸಲಿದ್ದು, ಅದನ್ನು ಕಳಿಸಿದ ದಿನದಿಂದ 90 ದಿನಗಳ ಒಳಗೆ ನೀವು ಸೂಚಿಸಿದ ಯಾವುದಾದರೂ ಒಂದು ದಿನದಂದು ಜಾಹೀರಾತು ಪ್ರಕಟಿಸಲಾಗುವುದು. ಬುಕಿಂಗ್‌-ಕನ್‌ಫರ್ಮೇಷನ್‌ ಸೇರಿದಂತೆ ಜಾಹೀರಾತು ಕುರಿತ ಎಲ್ಲ ವಹಿವಾಟು [email protected] ಐಡಿಯೊಂದಿಗಿನ ಇ-ಮೇಲ್‌ ಮೂಲಕವೇ ನಡೆಯಲಿದೆ. ಹೆಚ್ಚಿನ ಮಾಹಿತಿ-ವಿವರಗಳಿಗೆ 94492 38494ಗೆ ವಾಟ್ಸ್ಯಾಪ್‌ ಮೆಸೇಜ್‌ ಮಾಡಿದರೆ ತಿಳಿಸಲಾಗುವುದು. ಈ ಕೊಡುಗೆ ಜನವರಿ 31ರ ರಾತ್ರಿ 12ಕ್ಕೆ ಕೊನೆಯಾಗಲಿದೆ.

    ಸಂಬಂಧಿತ ಸುದ್ದಿ: ಟೀಮ್‌ ಏಕತಾ: ಇದು ಈ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರ ಆಶಾಕಿರಣ

    ಸಂಬಂಧಿತ ಸುದ್ದಿ:ಸಾಮಾಜಿಕ ನ್ಯಾಯ ಕುರಿತು ರಾಜಿ ಇಲ್ಲದ ಕೆಲಸ: ಸಿಎಂ ಸಿದ್ದರಾಮಯ್ಯ ಭರವಸೆ

    ಸಂಬಂಧಿತ ಸುದ್ದಿ: ಪಂಚರಾಜ್ಯ ಚುನಾವಣೆ: ಛತ್ತೀಸ್‌ಗಢದಲ್ಲಿ 12 ಗಾಣಿಗ ಅಭ್ಯರ್ಥಿಗಳಿಗೆ ವಿಜಯ; ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಗೆಲುವು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!