ಬೆಂಗಳೂರು: ಮಕರ ಸಂಕ್ರಾಂತಿಗೆ ಈ ʼದೇವನಾಂಪ್ರಿಯʼ ಮೊದಲ ನೋಟ ಬೀರಿದ್ದಾನೆ. ಅರ್ಥಾತ್, ಭರತ್ ನಾವುಂದ ನಿರ್ದೇಶನದ ಮೂರನೇ ಸಿನಿಮಾ ʼದೇವನಾಂಪ್ರಿಯʼದ ಫಸ್ಟ್ ಲುಕ್ ಮಕರ ಸಂಕ್ರಮಣದಂದು ಬಿಡುಗಡೆ ಆಗಿದೆ.
ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ʼಅಡಚಣೆಗಾಗಿ ಕ್ಷಮಿಸಿʼ ಮತ್ತು ʼಮುಗಿಲ್ ಪೇಟೆʼ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ʼದೇವನಾಂಪ್ರಿಯʼ ಅಂದರೆ ʼದೇವತೆಗಳಿಗೆ ಪ್ರಿಯನಾದವನುʼ ಎಂದರ್ಥ. ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಹಿಂದೆ ಮಹಿಳೆಯ ಆಕೃತಿ, ಎರಡು ಗ್ರಾಮಗಳು.. ಹೀಗೆ ನಾನಾ ವಿಷಯಗಳು ಫಸ್ಟ್ ಲುಕ್ನಲ್ಲಿದ್ದು ಕುತೂಹಲ ಮೂಡಿಸಿದೆ.
ಕೌಟುಂಬಿಕ ಸೇಡಿನ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯʼ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಮ್ಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಸಂಬಂಧಿತ ಸುದ್ದಿ: ದಿನದ ಶುಭಾಶಯ ಎಂಬ ಹೊಸ ಅವಕಾಶ: ಮೊದಲ 25 ಮಂದಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ
ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್
ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..