ಬೆಂಗಳೂರು: ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉದ್ಯಾವರ ವಲಯ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷರಾಗಿ ಯು. ಶಿವರಾಯ ಅವರು ನೇಮಕಗೊಂಡಿದ್ದಾರೆ. ಇವರ ಜೊತೆಗೆ ಎಂಟು ಉಪಾಧ್ಯಕ್ಷರು, ಒಬ್ಬರು ಪ್ರಧಾನ ಕಾರ್ಯದರ್ಶಿ, ಇಬ್ಬರು ಜೊತೆ ಕಾರ್ಯದರ್ಶಿ, ಒಬ್ಬರು ಕೋಶಾಧಿಕಾರಿ, ಇಬ್ಬರು ಸಂಘಟನಾ ಕಾರ್ಯದರ್ಶಿಗಳ ಸ್ಥಾನಕ್ಕೂ ಸಮಾಜ ಬಾಂಧವರನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಉದ್ಯಮಿ ಶಿವರಾಮ ಶೆಟ್ಟಿ, ಶ್ರೀನಿಧಿ ಸ್ಪನ್ ಪೈಪ್ ಇಂಡಸ್ಟ್ರೀಸ್ನ ನಾಗರಾಜ ಮೂಲ್ಕಿ, ಅನಿವಾಸಿ ಭಾರತೀಯ ಗೋಪಾಲ ಗಾಣಿಗ, ವಕೀಲ ಗಣೇಶ್ ಕುಮಾರ್ ಮಟ್ಟು, ರೂಫ್ಟೆಕ್ ಕನ್ಸ್ಟ್ರಕ್ಷನ್ ಕೆಮಿಕಲ್ ಕಂಪನಿಯ ಯು. ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಧೀರೇಂದ್ರ, ಮಾರುತಿ ಟ್ರೇಡರ್ಸ್ನ ಸಂತೋಷ್ ಕುಮಾರ್ ನೇಮಕಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ ಯು. ಚಂದ್ರಶೇಖರ್, ಜೊತೆ ಕಾರ್ಯದರ್ಶಿಗಳಾಗಿ ಉದ್ಯಮಿಗಳಾಗಿರುವ ಸತೀಶ್ ಗಾಣಿಗ, ಚಂದ್ರಕಾಂತ್ ಮಣಿಪುರ ಅವರನ್ನು ನೇಮಕ ಮಾಡಲಾಗಿದೆ. ಕೋಶಾಧಿಕಾರಿಯಾಗಿ ಲಿಟ್ಲ್ ರಾಕ್ ಸ್ಕೂಲ್ನ ನಂದನ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಉದ್ಯಮಿಗಳಾಗಿರುವ ದಯಾನಂದ ಶೆಟ್ಟಿ, ಪುರುಷೋತ್ತಮ ಅವರು ನೇಮಕಗೊಂಡಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಘವೇಂದ್ರ ಟೈಲರ್, ಎ.ಎಸ್. ಕಟಪಾಡಿ, ಬಿಪಿನ್ ಚಂದ್ರ ಕಟಪಾಡಿ, ವಿಜಯ್ ಜಿ. ಆರೂರು ತೋಟ, ಸೀತಾರಾಮ ಗಾಣಿಗ ಬೊಳ್ಜೆ, ಪ್ರಕಾಶ್ ಎ.ಜಿ. ಮಣಿಪುರ, ಶಂಕರ್ ಮಣಿಪುರ, ವಜ್ರಕುಮಾರ್ ಮಣಿಪುರ, ವಿಘ್ನೇಶ್ ಬೋಳಾರುಗುಡ್ಡೆ, ಗೋಪಾಲ ಗಾಣಿಗ ಆರೂರು ತೋಟ, ಚಂದ್ರಕಾಂತ ಸಂಪಿಗೆನಗರ, ವಾರಿಜ ಜಯಕುಮಾರ್, ಯಶೋಧ ಭಾಸ್ಕರ್, ರವೀಂದ್ರ ಉದ್ಯಾವರ, ಜಗದೀಶ್ ಪಿತ್ರೋಡಿ, ರಮೇಶ್ ಕುಮಾರ್ ಬೊಳ್ಜೆ, ರಾಘವೇಂದ್ರ, ಶರತ್ ಕುಮಾರ್, ಅಭಿಷೇಕ್ ಆರೂರು ತೋಟ, ಕೃಷ್ಣ ಗಾಣಿಗ ಕಟಪಾಡಿ, ಪ್ರಕಾಶ್ ಗಾಣಿಗ ಕೇದಾರ್, ಜಯಕರ ಗಾಣಿಗ ಕೇದಾರ್, ಉಮೇಶ ಗಾಣಿಗ, ಕಿಶೋರ್, ಗಣೇಶ್ ಕುಮಾರ್ ಉದ್ಯಾವರ, ಉಮೇಶ್, ನಿಖಿಲ್, ಸುನಿಲ್ ಮತ್ತು ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷ
ಉಪಾಧ್ಯಕ್ಷ
ಪ್ರಧಾನ ಕಾರ್ಯದರ್ಶಿ
ಜೊತೆ ಕಾರ್ಯದರ್ಶಿ
ಕೋಶಾಧಿಕಾರಿ
ಸಂಘಟನಾ ಕಾರ್ಯದರ್ಶಿ
(ಚಿತ್ರಕೃಪೆ: ಸಂಪರ್ಕ ಸುಧಾ)