ಬೆಂಗಳೂರು: ಅಸ್ಸಾಂ ಪಬ್ಲಿಕ್ ಸರ್ವಿಸ್ ಕಮಿಷನ್ (ಎಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನಮ್ರತಾ ಸಾಹು ಅವರು ಅಸ್ಸಾಂ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.
ಎಸಿಎಸ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿರುವ ನಮ್ರತಾ ಸಾಹು ಅವರನ್ನು ಅಖಿಲ ಭಾರತೀಯ ತೈಲಿಕ ಸಾಹು ಮಹಾಸಭಾದ ಅಸ್ಸಾಂ ಘಟಕ ಸನ್ಮಾನಿಸಿ ಅಭಿನಂದಿಸಿ ಶುಭ ಹಾರೈಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಈ ಸಮಾರಂಭ ಅತ್ಯಂತ ಸರಳವಾಗಿ ನೆರವೇರಿತು.
ಅಖಿಲ ಭಾರತೀಯ ತೈಲಿಕ ಸಾಹು ಮಹಾಸಭಾ ಅಸ್ಸಾಂ ಘಟಕದ ರಾಜ್ಯಾಧ್ಯಕ್ಷ ಕಮಲೇಶ್ ಕುಮಾರ್ ಗುಪ್ತ, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಸಾಹು ಹಾಗೂ ಅಸ್ಸಾಂ ಗ್ರಾಮೀಣ ವಿಕಾಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಮತ್ತು ಉದ್ಯೋಗಿಗಳ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ಸತ್ಯನಾರಾಯಣ್ ಸಾಹು ಜೊತೆಗೆ ನಮ್ರತಾ ಅವರ ತಂದೆ ಗೋಪಾಲ್ ಸಾಹು ಉಪಸ್ಥಿತರಿದ್ದರು.