Saturday, September 21, 2024
spot_img
More

    Latest Posts

    ಗಾಣಿಗರ ದಿನದರ್ಶಿಕೆ ಲೋಕಾರ್ಪಣೆ, ರೇಖಾ ವೇಣುಗೋಪಾಲ್ ಅವರಿಗೆ ಸನ್ಮಾನ

    ಬೆಂಗಳೂರು: ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಗಾಣಿಗರ ಯುವವೇದಿಕೆ ಹೊಸಕೋಟೆ ಹಾಗೂ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ‘ಗಾಣಿಗರ ದಿನದರ್ಶಿಕೆ’ ಅನಾವರಣ ಮಾಡುವ ಜೊತೆಗೆ ದೇವನಹಳ್ಳಿ ಪುರಸಭಾ ನೂತನ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮತ್ತು ಮಾಜಿ ಸದಸ್ಯ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

    ಬೆಂಗಳೂರು ಹೊರವಲಯದ ಹೊಸಕೋಟೆಯ ಗಾಣಿಗರ ಪೇಟೆಯ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಜನವರಿ 23ರ ಶನಿವಾರದಂದು ಗಾಣಿಗರ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಇತ್ತೀಚೆಗಷ್ಟೇ ದೇವನಹಳ್ಳಿ ಪುರಸಭೆಯ ನೂತನ ಅಧ್ಯಕ್ಷೆ ಆಗಿ ಆಯ್ಕೆ ಆಗಿರುವ, ಗಾಣಿಗ ಸಮಾಜದವರೇ ಆಗಿರುವ ರೇಖಾ ವೇಣುಗೋಪಾಲ್ ಮತ್ತು ಅವರ ಪತಿ, ಮಾಜಿ ಸದಸ್ಯ ವೇಣುಗೋಪಾಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.


    ಸಂಬಂಧಿತ ಸುದ್ದಿ: ದೇವನಹಳ್ಳಿ ಪುರಸಭೆ ಅಧ್ಯಕ್ಷೆ ಆಗಿ ರೇಖಾ ವೇಣುಗೋಪಾಲ್ ಅವಿರೋಧ ಆಯ್ಕೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!