ಬೆಂಗಳೂರು: ಅಖಿಲ ಕರ್ನಾಟಕ ಗಾಣಿಗ ಮಹಾಸಭಾ, ಗಾಣಿಗರ ಯುವವೇದಿಕೆ ಹೊಸಕೋಟೆ ಹಾಗೂ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ‘ಗಾಣಿಗರ ದಿನದರ್ಶಿಕೆ’ ಅನಾವರಣ ಮಾಡುವ ಜೊತೆಗೆ ದೇವನಹಳ್ಳಿ ಪುರಸಭಾ ನೂತನ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಮತ್ತು ಮಾಜಿ ಸದಸ್ಯ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಹೊರವಲಯದ ಹೊಸಕೋಟೆಯ ಗಾಣಿಗರ ಪೇಟೆಯ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಜನವರಿ 23ರ ಶನಿವಾರದಂದು ಗಾಣಿಗರ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಇತ್ತೀಚೆಗಷ್ಟೇ ದೇವನಹಳ್ಳಿ ಪುರಸಭೆಯ ನೂತನ ಅಧ್ಯಕ್ಷೆ ಆಗಿ ಆಯ್ಕೆ ಆಗಿರುವ, ಗಾಣಿಗ ಸಮಾಜದವರೇ ಆಗಿರುವ ರೇಖಾ ವೇಣುಗೋಪಾಲ್ ಮತ್ತು ಅವರ ಪತಿ, ಮಾಜಿ ಸದಸ್ಯ ವೇಣುಗೋಪಾಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಬಂಧಿತ ಸುದ್ದಿ: ದೇವನಹಳ್ಳಿ ಪುರಸಭೆ ಅಧ್ಯಕ್ಷೆ ಆಗಿ ರೇಖಾ ವೇಣುಗೋಪಾಲ್ ಅವಿರೋಧ ಆಯ್ಕೆ