Saturday, September 21, 2024
spot_img
More

    Latest Posts

    ಫೆ. 14ರಂದು ಹಿರಿಯ ನಾಗರಿಕರ ಕುಟೀರ ಲೋಕಾರ್ಪಣೆ

    ಬೆಂಗಳೂರು: ಶ್ರೀ ಲಕ್ಷ್ಮೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನಿರ್ಮಿಸಿರುವ ಹಿರಿಯ ನಾಗರಿಕರ ಕುಟೀರ ಫೆ.14ರಂದು ಲೋಕಾರ್ಪಣೆ ಆಗಲಿದೆ. ಬೆಂಗಳೂರಿನ ಆನೇಕಲ್‌ನ ಶ್ರೀ ಶನಿಮಹಾತ್ಮ ದೇವಸ್ಥಾನದ ಬಳಿ ನಿರ್ಮಾಣಗೊಂಡಿರುವ ಈ ಹಿರಿಯ ನಾಗರಿಕರ ಕುಟೀರವನ್ನು ನಾಗಸಂದ್ರ ಜಂಗಮ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿ, ಪ್ರವಚನ ನೀಡಲಿರುವರು.

    ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಈ ಸಮಾರಂಭಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಶಿವಣ್ಣ, ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಉಪಾಧ್ಯಕ್ಷೆ ಎಸ್. ಲಲಿತಾ ಲಕ್ಷ್ಮೀನಾರಾಯಣ, ಪುರಸಭಾ ಸದಸ್ಯೆ ಭಾರತಿ ವಿರೂಪಾಕ್ಷಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಶ್ರೀ ಲಕ್ಷ್ಮೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಎನ್. ಶ್ರೀನಿವಾಸ, ಉಪಾಧ್ಯಕ್ಷ ಡಿ. ವಾಸುದೇವ್ ಉಪಸ್ಥಿತರಿರುವರು. ಶ್ರೀ ಲಕ್ಷ್ಮೀವೆಂಕಟೇಶ್ವರ ಟ್ರಸ್ಟ್ ಅಧ್ಯಕ್ಷ ಎ. ಕೆಂಪಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು.

    ದಿವಂಗತ ಶ್ರೀ ಸುಬ್ಬಮ್ಮ ಮತ್ತು ಶ್ರೀ ದಾಸಪ್ಪ ಶೆಟ್ಟಿ ಅವರ ಸ್ಮರಣಾರ್ಥ ಶ್ರೀಮತಿ ಮತ್ತು ಶ್ರೀ ಡಿ. ವಾಸುದೇವ ಹಾಗೂ ಶ್ರೀಮತಿ ಮತ್ತು ಶ್ರೀ ಡಿ. ರಾಮಕೃಷ್ಣ ಹಾಗೂ ಇವರ ಮಕ್ಕಳು ದಾನವಾಗಿ ನೀಡಿರುವ ಸ್ಥಳದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ಟ್ರಸ್ಟ್ ಈ ಹಿರಿಯ ನಾಗರಿಕರ ಕುಟೀರವನ್ನು ನಿರ್ಮಾಣ ಮಾಡಿದೆ.

    ದಿವಂಗತ ಶ್ರೀ ಸುಬ್ಬಮ್ಮ ಮತ್ತು ಶ್ರೀ ದಾಸಪ್ಪ ಶೆಟ್ಟಿ

    ಶ್ರೀ ಲಕ್ಷ್ಮೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಆಡಳಿತ ಮಂಡಳಿ

    • ಎನ್. ಶ್ರೀನಿವಾಸ- ಗೌರವಾಧ್ಯಕ್ಷ
    • ಎ. ಕೆಂಪಣ್ಣ ಶೆಟ್ಟಿ- ಅಧ್ಯಕ್ಷ
    • ಡಿ. ವಾಸುದೇವ- ಉಪಾಧ್ಯಕ್ಷ
    • ಟಿ.ಎಂ. ರಾಮಶೆಟ್ಟಿ- ಕಾರ್ಯದರ್ಶಿ
    • ಆರ್. ನಟರಾಜ್- ಖಜಾಂಚಿ
    • ವಿ. ಮುನಿಶೆಟ್ಟಿ- ಸದಸ್ಯ
    • ವಿ. ನಾರಾಯಣ ಶೆಟ್ಟಿ- ಸದಸ್ಯ
    • ವಿ. ಶ್ರೀನಿವಾಸ- ಸದಸ್ಯ
    • ಎಸ್. ಮುರಳೀಧರ- ಸದಸ್ಯ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!