ಬೆಂಗಳೂರು: ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಆಗ್ರಹಿಸಿ ಗಾಣಿಗ ಸಮುದಾಯದ ಧ್ವನಿ ದಿನೇದಿನೆ ಸಂಘಟಿತವಾಗುತ್ತಿದ್ದು, ಸೂಕ್ತಕ್ರಮ ಜರುಗಿಸುವಂತೆ ಮಾಡುವ ನಿಟ್ಟಿನಲ್ಲಿ ಪ್ರಕರಣ ಸಂಭವಿಸಿದ ದಿನದಿಂದಲೂ ಸತತವಾಗಿ ಬೆಳವಣಿಗೆಗಳು ನಡೆಯುತ್ತಿವೆ. ಅದರ ಮತ್ತೊಂದು ಭಾಗವಾಗಿ ಕುಂದಾಪುರ ತಾಲೂಕು ಗಾಣಿಗ ಸಂಘವು ಶುಕ್ರವಾರ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾಗಿದೆ.
ಉದಯ ಗಾಣಿಗ ಅವರ ಕೊಲೆ ಖಂಡನೀಯ, ಪಂಚಾಯತ್ ಅಧ್ಯಕ್ಷರಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಇದರ ಪ್ರಮುಖ ಆರೋಪಿಯಾಗಿದ್ದಾರೆ. ಅವರೊಂದಿಗೆ ಬಹಳಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಸೂಕ್ತಕ್ರಮಕ್ಕೆ ಆಗ್ರಹಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕುಂದಾಪುರ ಗಾಣಿಗ ಸಂಘ ಶಾಸಕ ಶ್ರೀನಿವಾಸ ಶೆಟ್ಟಿ ಅವರಲ್ಲಿ ಮನವಿ ಮಾಡಿಕೊಂಡಿದೆ.
ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಸಂಘದ ಮಾಜಿ ಅಧ್ಯಕ್ಷ ಮದ್ದುಗುಡ್ಡೆ ಕೊಗ್ಗ ಮಾಸ್ಟರ್, ರವಿ ಗಾಣಿಗ ಕೆಂಚನೂರು, ದಿನೇಶ್ ಗಾಣಿಗ ಕೋಟ, ನಾಗರಾಜ ಗಾಣಿಗ ಬಸ್ರೂರು, ಹಾಲಾಡಿ ಸೀತಾರಾಮ ಗಾಣಿಗ, ಭಾಸ್ಕರ ಗಾಣಿಗ ಕುಂದಾಪುರ, ರವಿ ಗಾಣಿಗ ಆಜ್ರಿ, ಪ್ರದೀಪ ಆಜ್ರಿ, ರಾಘವೇಂದ್ರ ಗಾಣಿಗ ಬಸ್ರೂರು, ಬಿ.ಜಿ. ನಾಗರಾಜ, ಆನಗಳ್ಳಿ ಗೋಪಾಲ ಗಾಣಿಗ, ಸಾಲಿಗ್ರಾಮ ನಾಗರಾಜ ಗಾಣಿಗ, ಸುಬ್ಬಣ್ಣ ಗಾಣಿಗ ಬಸ್ರುರು, ಚಂದ್ರಶೇಖರ ಬೀಜಾಡಿ, ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಸದಸ್ಯರಾಗಿರುವ ನಾಗೇಶ್ ಗಾಣಿಗ ಮತ್ತು ಶಿಲ್ಪಾ ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿ ಪ್ರಾಣೇಶ್ ಬಂಧನ; ಪ್ರಶ್ನಿಸಿದ್ದಕ್ಕೆ ಪ್ರಾಣ ತೆಗೆದ ಗ್ರಾಮ ಪಂಚಾಯತ್ ಅಧ್ಯಕ್ಷ?
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಗಾಣಿಗ ಸಂಘಟನೆ ಆಗ್ರಹ
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಿ; ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹ
ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಲಿ; ಮಾಜಿ ಸಚಿವ ಸೊರಕೆ ಆಗ್ರಹ
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. G-Mail ID: [email protected]