ಬೆಂಗಳೂರು: ಸಾಹು ಚೌಪಾಲ್ ನಡೆಸುತ್ತಿರುವ ಎಲ್ಲ ಕಾರ್ಯಗಳು ಸಮಾಜದ ಪ್ರತಿ ಮನೆಮನೆಗೂ ತಲುಪಬೇಕು ಎಂದು ಸಾಹು ಚೌಪಾಲ್ನ ರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ ಕುಮಾರ್ ಸಾಹು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಪಂಜಾಬ್ನ ಲುಧಿಯಾನದ ಫೀಲ್ಡ್ ಗಂಜ್ನಲ್ಲಿರುವ ಸಾಹು ಚೌಪಾಲ್ನ ರಾಷ್ಟ್ರೀಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅದರಲ್ಲೂ ಪಂಜಾಬ್ನಲ್ಲಿ ಸಾಹು ಚೌಪಾಲ್ ನಡೆಸಿರುವ ಸಾಮಾಜಿಕ ಚಟುವಟಿಕೆಗಳು ಮನೆಮನೆಯನ್ನೂ ತಲುಪಬೆಕು. ಉದ್ಯೋಗ ಹಾಗೂ ಶಿಕ್ಷಣದ ವಿಚಾರಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈ ವಿಷಯದಲ್ಲಿ ನಾವು ಸಾಹು ಚೌಪಾಲ್ನ ರಾಷ್ಟ್ರೀಯ ಅಧ್ಯಕ್ಷ ಸಾಹಿಬ್ ಶರಣ್ ಸಾಹು ಅವರನ್ನು ಅನುಸರಿಸಬೇಕು. ಅವರು ಸಾಹು ಚೌಪಾಲ್ನ ಸದಸ್ಯರನ್ನು ಸಂಪರ್ಕಿಸಿ ಸಂಘಟಿಸಲು ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ನಮ್ಮೆಲ್ಲರ ಕೆಲಸವೂ ಸಾಗಬೇಕು ಎಂದು ರಾಜೇಶ್ ಕುಮಾರ್ ಸಾಹು ಹೇಳಿದರು.
ಸಾಹಿಬ್ ಶರಣ್ ಸಾಹು ಅವರ ಮಾರ್ಗದರ್ಶನದಲ್ಲಿ ಸಾಹು ಚೌಪಾಲ್ನ ಎಲ್ಲೆಡೆಯ ಎಲ್ಲ ಪದಾಧಿಕಾರಿಗಳೂ ಒಗ್ಗೂಡಿ ಕೆಲಸ ಮಾಡಬೇಕು. ಅದಕ್ಕಾಗಿ ಪಂಜಾಬ್ನ 23 ಜಿಲ್ಲೆಗಳಲ್ಲಿರುವ ಎಲ್ಲ ಸಾಹು ಚೌಪಾಲ್ ಸಂಘಟನೆಗಳು ಒಂದೇ ವೇದಿಕೆಯಡಿ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದು ಆಶಿಸಿದರು.
ಜೂನ್ 13ರಂದು ನಡೆದ ಈ ಸಭೆಯಲ್ಲಿ ಸಾಹು ಚೌಪಾಲ್ನ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಬ್ರಿಜೇಶ್ ಕುಮಾರ್ ಸಾಹು, ಸಾಹು ಎಜುಕೇಷನ್ ಆ್ಯಂಡ್ ಟ್ರೇನಿಂಗ್ ಸೆಕ್ರೆಟರಿ ಗಿರಿಧಾರಿ ಸಾಹು, ಸಲಹೆಗಾರರಾದ ಓಂಪ್ರಕಾಶ್ ಸಾಹು, ಜಿತೇಂದ್ರ ಸಾಹು, ರವೀಂದ್ರ ಸಾಹು ಮುಂತಾದವರು ಉಪಸ್ಥಿತರಿದ್ದರು.
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.
ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ
ಅಸ್ಸಾಂ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ನಮ್ರತಾ ಸಾಹು