Sunday, September 22, 2024
spot_img
More

    Latest Posts

    ಗುರುದತ್ ಗಾಣಿಗ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ‘ಮಾಫಿಯಾ’

    ಬೆಂಗಳೂರು: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅದಿತಿ ಪ್ರಭುದೇವ ನಾಯಕ-ನಾಯಕಿಯರಾಗಿ ಗುರುದತ್ ಗಾಣಿಗ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬುದು ಈಗಾಗಲೇ ಜನಜನಿತವಾಗಿರುವ ವಿಷಯ. ಆದರೆ ಇದುವರೆಗೂ ಬಹುತೇಕ ಗುಟ್ಟಾಗಿಯೇ ಇರಿಸಿದ್ದ ಆ ಚಿತ್ರದ ಶೀರ್ಷಿಕೆ ಏನು ಎಂಬುದನ್ನು ನಾಯಕ ನಟ ಪ್ರಜ್ವಲ್ ದೇವರಾಜ್ ಜನ್ಮದಿನವಾದ ಇಂದು ಅನಾವರಣಗೊಳಿಸಲಾಗಿದೆ.

    ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾದ ಚಟುವಟಿಕೆಯನ್ನು ‘ಪಿಡಿ-35’ ಎಂಬ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಆರಂಭಿಸಲಾಗಿತ್ತು. ಇದೀಗ ಜನ್ಮದಿನಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಶೀರ್ಷಿಕೆ ಹಾಗೂ ಹೊಸದೊಂದು ಪೋಸ್ಟರ್ ಅನಾವರಣಗೊಳಿಸಲಾಗಿದೆ. ಅಂದಹಾಗೆ ಇದು ಪ್ರಜ್ವಲ್ ಅಭಿನಯಿಸುತ್ತಿರುವ 35ನೇ ಸಿನಿಮಾ ಹಾಗೂ ಗುರುದತ್ ಗಾಣಿಗ ನಿರ್ದೇಶನದ ಎರಡನೇ ಚಿತ್ರ.

    ಸಿನಿಮಾದ ಪೋಸ್ಟರ್​

    ಈಗಾಗಲೇ ರೆಬೆಲ್​ ಸ್ಟಾರ್ ಅಂಬರೀಷ್​, ಕಿಚ್ಚ ಸುದೀಪ್​, ಸುಹಾಸಿನಿ ಮುಂತಾದವರು ಪ್ರಮುಖ ಪಾತ್ರದಲ್ಲಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಗುರುದತ್, ಸ್ಯಾಂಡಲ್​ವುಡ್​​ನ ಅತಿಕಿರಿಯ ನಿರ್ದೇಶಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ನಾಯಕ ಪ್ರಜ್ವಲ್​ ದೇವರಾಜ್ ಜನ್ಮದಿನದ ಸಂಭ್ರಮ

    ನಿರ್ಮಾಪಕ ಕುಮಾರ್ ಬಿ., ನಾಯಕ ಪ್ರಜ್ವಲ್ ದೇವರಾಜ್​, ನಿರ್ದೇಶಕ ಗುರುದತ್ ಗಾಣಿಗ ಹಾಗೂ ಚಿತ್ರತಂಡದ ಇತರ ಸದಸ್ಯರು ಇಂದು ಕೇಕ್​ ಕತ್ತರಿಸುವ ಮೂಲಕ ಪ್ರಜ್ವಲ್ ದೇವರಾಜ್ ಜನ್ಮದಿನವನ್ನು ಆಚರಿಸಿದರು. ಜೊತೆಗೆ ಟೈಟಲ್ ಲಾಂಚ್​ ಮಾಡಿದ್ದಲ್ಲದೆ ಮೋಷನ್​ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ.

    ನಾಯಕ ಪ್ರಜ್ವಲ್​, ನಿರ್ಮಾಪಕ ಕುಮಾರ್, ನಿರ್ದೇಶಕ ಗುರುದತ್, ಸಂಭಾಷಣೆಕಾರ ಮಾಸ್ತಿ…

    ಮಾನವ ಕಳ್ಳಸಾಗಣಿಕೆಯ ಕಥಾಹಂದರದ ಈ ಚಿತ್ರಕಥೆ 1999ರ ಕಾಲಘಟ್ಟದಿಂದ 2009ರವರೆಗೆ ಸಾಗಲಿದೆ. ಬೆಂಗಳೂರು ‌ಕುಮಾರ್ (ಕುಮಾರ್ ಬಿ.) ಈ ಸಿನಿಮಾದ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಮಾಸ್ತಿ ಅವರ ಸಂಭಾಷಣೆ ಇರಲಿದೆ. ಪ್ರಮೋದ್ ಮರವಂತೆ ಈ ಚಿತ್ರಕ್ಕೆ ಒಂದು ಗೀತೆಯನ್ನು ರಚಿಸಿದ್ದಾರೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. 
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.

    ವಿಶ್ವ ಯೋಗ ದಿನದಂದೇ ನಿಮಗಿದೋ ಕೇಳುವ ಯೋಗ; ಕಣಗಾಲರ ‘ಮಾನಸ ಸರೋವರ’ ಕೇಳಿಸಲಿದ್ದಾರೆ ಡಾವೆಂಕಿ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!