ಬೆಂಗಳೂರು: ಭದ್ರಾವತಿಯ ತಾಲೂಕು ಗಾಣಿಗರ ಸಂಘವು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗಣಹೋಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭದ್ರಾವತಿಯ ಹೊಸ ಬುಳ್ಳಾಪುರದ ಶ್ರೀವರಸಿದ್ಧಿ ಮಹಾಗಣಪತಿ ಸುಬ್ರಹ್ಮಣ್ಯ ನವಗ್ರಹ ದೇವಸ್ಥಾನದ ಸಹಯೋಗದಲ್ಲಿ ಆಗಸ್ಟ್ 22ರಂದು ಈ ಪೂಜಾ ಸಮಾರಂಭ ನೆರವೇರಲಿದೆ.
ಅಂದು ಬೆಳಗ್ಗೆ 9.30ಕ್ಕೆ ಗಣಹೋಮ ಹಾಗೂ 10.30ಕ್ಕೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದ್ದು, 12.30ಕ್ಕೆ ಭೋಜನ ಪ್ರಸಾದ ವಿತರಣೆ ಇರಲಿದೆ. ಭದ್ರಾವತಿ ತಾಲೂಕು ಶ್ರೀಧರ್ಮಜಾಗರಣ ಮಹಾಸಭಾದ ಅರ್ಚಕರು ಈ ಪೂಜಾ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ನೆರವೇರಿಸಿ ಕೊಡಲಿರುವರು.
ಭದ್ರಾವತಿಯ ಸಮಸ್ತ ಗಾಣಿಗ ಬಂಧುಗಳು ಹಾಗೂ ಬುಳ್ಳಾಪುರ ಸಾರ್ವಜನಿಕರು ಈ ದೇವತಾ ಕಾರ್ಯಕ್ಕೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಆಗಮಿಸಿ ಪಾಲ್ಗೊಳ್ಳಬೇಕು ಎಂದು ಭದ್ರಾವತಿಯ ತಾಲೂಕು ಗಾಣಿಗ ಸಂಘವು ಮನವಿ ಮಾಡಿಕೊಂಡಿದೆ.
ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್ಲೈನ್ ಸ್ಪರ್ಧೆ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯುತ್ಸವ
ಸಂಬಂಧಿತ ಸುದ್ದಿ: ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥರಿಂದ ಮುದ್ರಾಧಾರಣೆ, ಆಶೀರ್ವಚನ, ವರ್ಧಂತ್ಯುತ್ಸವ