ಬೆಂಗಳೂರು: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಗಾಣಿಗ ಸಮಾಜಕ್ಕಾಗಿ ಅದರಲ್ಲೂ ಶೈಕ್ಷಣಿಕವಾಗಿ ಹಲವಾರು ಮಹತ್ವದ ಕೆಲಸಗಳನ್ನು ಮಾಡುತ್ತಿದ್ದು, ಇದೀಗ ಮತ್ತೊಂದು ಮಹತ್ಕಾರ್ಯಕ್ಕೂ ಮುಂದಾಗಿದೆ. ಆ ನಿಟ್ಟಿನಲ್ಲಿ ಇನ್ನೊಂದು ಸಂಸ್ಥೆಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.
ಗಾಣಿಗ ಸಮಾಜದ ಮಹತ್ವಾಕಾಂಕ್ಷಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿವೇತನದಡಿ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅತ್ಯುತ್ತಮ ತರಬೇತಿಯನ್ನು ನೀಡಲು ಎಸ್ಜಿಇಸಿಟಿ ಮುಂದಾಗಿದೆ. ಅದಕ್ಕೆಂದೇ ರಾಜ್ಯಾದ್ಯಂತ ಒಟ್ಟು 19 ಮಹತ್ವಾಕಾಂಕ್ಷಿ ಪ್ರತಿಭಾವಂತರನ್ನು ಆರಿಸಿಕೊಂಡಿದ್ದು, ಅವರಿಗೆ ಉಚಿತವಾಗಿ ತರಬೇತಿಯನ್ನು ಕೊಡಲಿದೆ.
ಇಂಡಿಯಾ ಫಾರ್ ಐಎಎಸ್ ಎಂಬ ಸಂಸ್ಥೆಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿರುವ ಎಸ್ಜಿಇಸಿಟಿ, ಅದಕ್ಕಾಗಿ ತಗುಲುವ ವೆಚ್ಚವನ್ನೂ ಭರಿಸಲಿದೆ. ನಮ್ಮ ಸಮಾಜದ 19 ಮಹತ್ವಾಕಾಂಕ್ಷಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ/ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಂಡಿಯಾ ಫಾರ್ ಐಎಎಸ್ ಸಂಸ್ಥೆ ಮೂಲಕ ತರಬೇತಿ ಕೊಡಿಸಲಾಗುತ್ತಿದೆ. ಅದಕ್ಕಾಗಿ ಆರಂಭಿಕ ಮೊತ್ತವಾಗಿ 50 ಸಾವಿರ ರೂಪಾಯಿಯನ್ನು ಇಂಡಿಯಾ ಫಾರ್ ಐಎಎಸ್ಗೆ ಚೆಕ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ಎಸ್ಜಿಇಸಿಟಿ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಆರ್. ನಾಗರಾಜ್ ಶೆಟ್ಟಿ ತಿಳಿಸಿದ್ದಾರೆ.
ಇಂಡಿಯಾ ಫಾರ್ ಐಎಎಸ್ ಸಂಸ್ಥಾಪಕ ಹಾಗೂ ಸಿಇಒ ಕೂಡ ಆಗಿರುವ ಪಿ.ಸಿ. ಶ್ರೀನಿವಾಸ್ ಅವರಿಗೆ ಚೆಕ್ ಹಸ್ತಾಂತರಿಸಲಾಗಿದ್ದು, ಈ ಸಂದರ್ಭದಲ್ಲಿ ತಮ್ಮ ಜೊತೆ ಎಸ್ಜಿಇಸಿಟಿ ಟ್ರಸ್ಟಿಗಳಾದ ಕೆ.ಎಂ. ನಾರಾಯಣಪ್ಪ, ಆರ್.ವಿ. ನಾಗಭೂಷಣ್ ಅವರು ಉಪಸ್ಥಿತರಿದ್ದರು. ತರಬೇತಿ ತರಗತಿಗಳು ಇದೇ ಆಗಸ್ಟ್ 16ರಂದು ಆರಂಭವಾಗಲಿವೆ ಎಂದು ನಾಗರಾಜ್ ಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕ: www.sgect.in , www.india4ias.com
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ ಮಹಾಸಭೆ, ನೂರಾರು ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕರಿಗೆ ‘ವಿದ್ಯಾಜ್ಯೋತಿ’ ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಶ್ರೀ ಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನಿಂದ ವಿದ್ಯಾಶ್ರಯ ಯೋಜನೆ
ಸಂಬಂಧಿತ ಸುದ್ದಿ: ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಗಾಣಿಗ ಬಾಂಧವರಿಗಿಲ್ಲಿದೆ ಅವಕಾಶ..