ಬೆಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕುಮಟಾದ ಗಾಣಿಗ ಯುವಬಳಗ (ರಿ.) ಗಾಣಿಗ ಸಮುದಾಯದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್ಲೈನ್ ಸ್ಪರ್ಧೆ ಹಮ್ಮಿಕೊಂಡಿದ್ದು, ಇಂದು ಅದರ ಫಲಿತಾಂಶವನ್ನು www.globalganiga.com ಹಾಗೂ ಬಳಗದ ಅಧಿಕೃತ ಫೇಸ್ಬುಕ್ ಪೇಜ್ Ganiga Yuva Balaga ದಲ್ಲಿ ಪ್ರಕಟಿಸಿದೆ.
ಈ ಸ್ಪರ್ಧೆಯಲ್ಲಿ ಗಾಣಿಗ ಸಮಾಜದ ಐವರು ಪುಟಾಣಿಗಳು ವಿಜೇತರಾಗಿದ್ದು, ಅವರಿಗೆ ಅನುಕ್ರಮವಾಗಿ 1ರಿಂದ 5ರ ವರೆಗಿನ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಆ ಪೈಕಿ ಪ್ರಣವ್ ಗೋಪಾಲಕೃಷ್ಣ ಶೆಟ್ಟಿ ಪ್ರಥಮ, ಕಾರ್ತಿಕೇಯ ಕಿರಣ್ ಶೆಟ್ಟಿ ದ್ವಿತೀಯ, ಆರಿಧ್ಯಾ ವಿನಾಯಕ ಶೆಟ್ಟಿ ತೃತೀಯ, ಎ.ವಿವಾನ್ ಚತುರ್ಥ ಹಾಗೂ ಎಸ್. ಉಜ್ವಲ್ ಪಂಚಮ ಬಹುಮಾನ ಗಳಿಸಿದ್ದಾರೆ.
ಗಾಣಿಗ ಸಮಾಜದ ಏಳು ವರ್ಷಗಳ ಒಳಗಿನ ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿದ್ದು, 27-07-2014ರ ನಂತರ ಜನಿಸಿರುವ ಮಕ್ಕಳು ಮಾತ್ರ ಇದರಲ್ಲಿ ಭಾಗವಹಿಸಿದ್ದರು. ಸುಮಾರು 70 ಸ್ಪರ್ಧಿಗಳು ಇದರಲ್ಲಿ ಪಾಲ್ಗೊಂಡಿದ್ದು, ಮುಂಬೈ, ಗೋವಾ, ಬೆಂಗಳೂರು ಮುಂತಾದ ಕಡೆಯಿಂದಲೂ ಸ್ಪರ್ಧಿಗಳಿದ್ದರು ಎಂದು ಬಳಗವು ತಿಳಿಸಿದೆ.
ವಿಜೇತರಾದ ಮೊದಲ ಮೂರು ಮಂದಿಗೆ ನಗದು ಬಹುಮಾನ ಸಿಗಲಿದೆ. ಮೊದಲನೆಯ ಬಹುಮಾನವಾಗಿ 7,777 ರೂ., ಎರಡನೆಯ ಬಹುಮಾನವಾಗಿ 5,555 ರೂ. ಮತ್ತು ಮೂರನೆಯ ಬಹುಮಾನವಾಗಿ 3,333 ರೂ. ನೀಡಲಾಗುವುದು. ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದವರಿಗೆ ಸಮಾಧಾನಕರ ಬಹುಮಾನವಾಗಿ ಆಕರ್ಷಕ ಉಡುಗೊರೆ ನೀಡಲಾಗುವುದು ಎಂದು ಬಳಗ ತಿಳಿಸಿದೆ.
ವಿಜೇತರಾಗಿರುವ ಸ್ಥಳೀಯ ಸ್ಪರ್ಧಿಗಳಿಗೆ ಖುದ್ದಾಗಿ ಬಹುಮಾನ ನೀಡಲಾಗುವುದು. ದೂರದ ಊರಿನಲ್ಲಿರುವ ವಿಜೇತರಿಗೆ ಕೊರಿಯರ್ ಮೂಲಕ ಬಹುಮಾನ ತಲುಪಿಸಲಾಗುವುದು. ಹೆಚ್ಚಿನ ಮಾಹಿತಿಗೆ 9742252260 ಅಥವಾ 8660250760 ನಂಬರ್ ಮೂಲಕ ಸಂಪರ್ಕಿಸಬಹುದು ಎಂದು ಗಾಣಿಗ ಯುವ ಬಳಗ ತಿಳಿಸಿದೆ.
ವಿಜೇತ ಮಕ್ಕಳ ಫೋಟೋ ಸಹಿತ ವಿವರ ಈ ಕೆಳಗಿನಂತಿದೆ..
ನಿರ್ಣಾಯಕರ ಮೆಚ್ಚುಗೆ ಪಡೆದ ಮಕ್ಕಳ ವಿವರ ಇಂತಿದೆ
ನಿರ್ಣಾಯಕರ ಮೆಚ್ಚುಗೆಗೆ ಪಾತ್ರರಾಗಿರುವ ಶ್ರೇಯಾಂಕ್ ರಮೇಶ್ ಶೆಟ್ಟಿ, ಶಮಿಕಾ ಪ್ರವೀಣ್ ಶೆಟ್ಟಿ ಮತ್ತು ರಿಶಾಂಕ್ ಗಾಣಿಗ ಅವರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್ಲೈನ್ ಸ್ಪರ್ಧೆ
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಆನ್ಲೈನ್ ಸ್ಪರ್ಧೆ
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ