ಬೆಂಗಳೂರು: ಮಂಗಳೂರು ಪಡುಬದಿನಡಿ ಶ್ರೀ ಅರಸು ಮುಂಡಿತ್ತಾಯ ಧೂಮಾವತಿ ದೈವಸ್ಥಾನಕ್ಕೆ ಸಂಬಂಧಿಸಿದ, ನೂತನವಾಗಿ ನಿರ್ಮಾಣಗೊಂಡಿರುವ ಗಾಣದ ಕೊಟ್ಯದ ಪ್ರವೇಶೋತ್ಸವ ಸೆಪ್ಟೆಂಬರ್ 9ರ ಗುರುವಾರ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಈ ಗಾಣದ ಕೊಟ್ಯದ ಪ್ರವೇಶೋತ್ಸವ ನಡೆಯಲಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಶನಿಪೂಜೆ ಕೂಡ ನೆರವೇರಲಿದೆ.
ಶನಿಪೂಜೆ ಬಳಿಕ ಗಾಣದ ಕುತ್ತಿಗೆ ತೆಂಗಿನೆಣ್ಣೆ ಹಾಕುವ ಅವಕಾಶ ಭಕ್ತಾದಿಗಳಿದ್ದು, ಆಸಕ್ತರು ಅದನ್ನು ತರುವಂತೆ ಆಯೋಜಕರಾಗಿರುವ ಆಡಳಿತ ಮಂಡಳಿ ಹಾಗೂ ಪಡುಬದಿನಡಿ ಗಾಣದ ಕೊಟ್ಯದ ಗಾಣಿಗ ಸಂಸಾರದವರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ಶೇಖರ ಗಾಣಿಗ ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಸಂಬಂಧಿತ ಸುದ್ದಿ: ಕಲಬೆರಕೆ ಎಣ್ಣೆ ವಿರುದ್ಧ ಪ್ರಧಾನಿ ಮೋದಿಯವರಲ್ಲಿ ಮೊರೆ ಇಟ್ಟ ಮುಖಂಡ..