ಬೆಂಗಳೂರು: ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಕುಮಟಾ ಗಾಣಿಗ ಯುವ ಬಳಗವು ಕುಮಟಾ ನಗರ ಶಕ್ತಿದೇವತೆಗೆ ವಿಜಯದಶಮಿಯಂದು ಪೂಜೆ ಸಲ್ಲಿಸಲಿದೆ.
ಕುಮಟಾದ ನೆಲ್ಲಿಕೇರಿಯ ಮಹಾಸತಿ ದೇವಸ್ಥಾನದಲ್ಲಿ ವಿಜಯದಶಮಿ ದಿನವಾದ ಅಕ್ಟೋಬರ್ 15ರ ಶುಕ್ರವಾರ ರಾತ್ರಿ 8 ಗಂಟೆಗೆ ಗಾಣಿಗ ಯುವ ಬಳಗದಿಂದ ಈ ವಿಶೇಷ ಪೂಜೆ ನಡೆಯಲಿದೆ.
ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜಾ ಸಮಾರಂಭದಲ್ಲಿ ಭಾಗವಹಿಸುವಂತೆ ಬಳಗ ಕೋರಿಕೊಂಡಿದೆ. ಹಾಗೆಯೇ ಪೂಜೆಗೆ ಆಗಮಿಸುವವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಬೇಕು ಎಂಬುದಾಗಿಯೂ ಬಳಗ ಮನವಿ ಮಾಡಿಕೊಂಡಿದೆ.
ಸಂಬಂಧಿತ ಸುದ್ದಿ: ರಕ್ತದಾನಕ್ಕೂ ತಂಡ ಕಟ್ಟಲು ಸಜ್ಜಾದ ಗಾಣಿಗ ಯುವ ಬಳಗ
ಸಂಬಂಧಿತ ಸುದ್ದಿ: ಕುಮಟಾ ಗಾಣಿಗ ಯುವ ಬಳಗದಿಂದ ಮತ್ತಷ್ಟು ದಿನಸಿ ಕಿಟ್ ವಿತರಣೆ
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..