ಬೆಂಗಳೂರು: ಕನ್ನಡ ಚಿತ್ರರಂಗದಲ್ಲೂ ಗಾಣಿಗ ಸಮುದಾಯದ ಪ್ರತಿಭಾವಂತರು ಈಗಾಗಲೇ ಕಾಣಿಸಿಕೊಂಡಿದ್ದು, ಅಂಥವರ ಸಾಲಿನಲ್ಲಿ ಇರುವ ಮತ್ತೊಬ್ಬ ಪ್ರತಿಭೆ ರಣ್ವೀರ್ ಪಾಟೀಲ್.
ʼಜಸ್ಟ್ ಆಕಸ್ಮಿಕʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪ್ರವೇಶ ಮಾಡಿದ ಇವರ ಅಭಿನಯದ ಮತ್ತೊಂದು ಸಿನಿಮಾ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ.
‘ಇದು ಆಕಾಶವಾಣಿ ಬೆಂಗಳೂರು ನಿಲಯ’. ಇದು ಇವರ ಅಭಿನಯದ ಎರಡನೇ ಸಿನಿಮಾವಾಗಿದ್ದು, ಅಕ್ಟೋಬರ್ 8ರಂದು ತೆರೆ ಕಂಡಿದೆ. ರಣ್ವೀರ್ ಪಾಟೀಲ್ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಶಿವನಂದಪ್ಪ ಬಳ್ಳಾರಿ ನಿರ್ಮಾಪಕರಾಗಿದ್ದು, ಹರಿಕೃಷ್ಣ ಅವರ ನಿರ್ದೇಶನವಿದೆ.
ನಿಖಿತಾ ಸ್ವಾಮಿ ನಾಯಕಿಯಾಗಿ ಅಭಿನಯಿಸಿದ್ದು, ಸುಚೇಂದ್ರ ಪ್ರಸಾದ್, ಟೆನಿಸ್ ಕೃಷ್ಣ, ನಾಗೇಂದ್ರ ಶಾ ಮುಂತಾದವರು ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ಸಂಯೋಜಿಸಿದ್ದು, ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನವಿದೆ.
ಉತ್ತರ ಕರ್ನಾಟಕದ ಹುನಗುಂದ ತಾಲೂಕು ಬನಿಹಟ್ಟಿ ಗ್ರಾಮದ ಗಾಣಿಗ ಸಮುದಾಯದ ಈ ಪ್ರತಿಭೆಗೆ ಹುನಗುಂದ ಹಾಗೂ ಇಳಕಲ್ಲ ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಮಾ ಅಮರಾವತಿ, ಕಾಂಗ್ರೆಸ್ ಮುಖಂಡ ಅಯ್ಯನಗೌಡ ಶೇ ಲಕ್ಕಿಹಾಳ, ಶರಣು ಲೆಕ್ಕಿಹಾಳ, ಬಸವರಾಜ ಸಜ್ಜನ ಮುಂತಾದವರು ಶುಭ ಹಾರೈಸಿದ್ದಾರೆ.
ಸಂಬಂಧಿತ ಸುದ್ದಿ: ಮೊದಲ ಸಿನಿಮಾದಲ್ಲೇ ನಿತಿನ್ ಗಾಣಿಗ ಬೆಸ್ಟ್ ವಿಲನ್; ಲೊಕಾರ್ನೊ ಫಿಲ್ಮ್ ಫೆಸ್ಟ್ನಲ್ಲಿ ಆಯ್ಕೆ
ಸಂಬಂಧಿತ ಸುದ್ದಿ: ‘ಎಡಗೈ’ಗೆ ಹಣ ಹಾಕಿದ ಗುರುದತ್ ಗಾಣಿಗ; ‘ಅಪಘಾತ’ಕ್ಕೆ ಕಾರಣವನ್ನೂ ಬಿಚ್ಚಿಟ್ಟರು..
ಸಂಬಂಧಿತ ಸುದ್ದಿ: ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್