ಬೆಂಗಳೂರು: ಗಾಣಿಗ ಸಮಾಜಕ್ಕೆ ಸೇರಿರುವ ಕೇರಳದ ವಣಿಯಾರ್ ಚೆಟ್ಟಿಯಾರ್ ಸಮುದಾಯದ ಕವಯಿತ್ರಿ ಸಜಿನಿ ಮನೋಜ್ ಅವರ ಕವನಸಂಕಲನ ಇತ್ತೀಚೆಗೆ ಕೇರಳದಲ್ಲಿ ಬಿಡುಗಡೆ ಆಯಿತು.
ಕೇರಳ ವಣಿಕ ವೈಶ್ಯ ಸಂಘದ ಅಧ್ಯಕ್ಷ ಕುಟ್ಟಪ್ಪನ್ ಚೆಟ್ಟಿಯಾರ್ ಅವರು ಸಜಿನಿ ಮನೋಜ್ ಅವರ ನೂತನ ಕವನಸಂಕಲನ ʼಮಝಾʼ ಬಿಡುಗಡೆ ಮಾಡಿದರು. ನಮ್ಮ ಸಮಾಜದಲ್ಲಿ ಇಂಥ ಒಬ್ಬ ಕವಯಿತ್ರಿ ಇರುವುದು ನಮಗೆ ಹೆಮ್ಮೆಯ ವಿಷಯ. ಭವಿಷ್ಯದಲ್ಲಿ ಇವರಿಂದ ಮತ್ತಷ್ಟು ಸಾಹಿತ್ಯ ಹೊರಹೊಮ್ಮಲಿ, ಇವರಿಗೆ ಇನ್ನಷ್ಟು ಮನ್ನಣೆ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಣಿಯಾರ್ ಚೆಟ್ಟಿಯಾರ್ ಸಮುದಾಯದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ನಿಲುಗಡೆ-ಸಂಚಾರ ಸಮಸ್ಯೆ ಬಗ್ಗೆ ಪೊಲೀಸರ ಗಮನ ಸೆಳೆದ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ
ಸಂಬಂಧಿತ ಸುದ್ದಿ: ಪತ್ರಕರ್ತ-ಕಾದಂಬರಿಕಾರ ಮಂಜುನಾಥ್ ಚಾಂದ್ ಅವರಿಗೆ ಬರಗೂರು ಪುಸ್ತಕ ಪ್ರಶಸ್ತಿ
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ