Saturday, September 21, 2024
spot_img
More

    Latest Posts

    ಕೊಪ್ಪಳ ಜಿಲ್ಲಾ ನೂತನ ಗಾಣಿಗ ಸಮುದಾಯ ಭವನ ಇದೇ ವಾರಾಂತ್ಯದಲ್ಲಿ ಉದ್ಘಾಟನೆ

    ಬೆಂಗಳೂರು: ಕೊಪ್ಪಳ ಜಿಲ್ಲಾ ನೂತನ ಗಾಣಿಗ ಸಮುದಾಯ ಭವನವು ಇದೇ ವಾರಾಂತ್ಯದ ಫೆ.26 ಮತ್ತು 27ರಂದು ಉದ್ಘಾಟನೆ ಆಗಲಿದೆ. ಕೊಪ್ಪಳದ ರೈಲ್ವೇ ಗೇಟ್ ಹತ್ತಿರದ ಕುಷ್ಟಗಿ ರಸ್ತೆಯಲ್ಲಿ ನಿರ್ಮಾಣ ಆಗಿರುವ ಈ ಸಮುದಾಯ ಭವನದ ಉದ್ಘಾಟನೆ ಜೊತೆಗೆ ಗಾಣದ ಕಣ್ಣಪ್ಪ ಪುತ್ಥಳಿ ಅನಾವರಣ ಮತ್ತು ಕಳಸಾರೋಹಣ ಕೂಡ ನಡೆಯಲಿದೆ.

    ಅಲ್ಲದೆ ಭೂದಾನಿ ದಿ‌. ಕಸ್ತೂರಮ್ಮ ಬಸನಗೌಡ ಪಾಟೀಲ್ ಸ್ಮರಣಾರ್ಥ ಕೊಡದಾಳ ಕ್ರಾಸ್‌ನಲ್ಲಿ ವಿದ್ಯಾವಿಕಾಸ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ. ಫೆ. 26ರಂದು ಈ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಮುದಾಯ ಭವನದಲ್ಲಿ ವಾಸ್ತುಶಾಂತಿ ಹೋಮ‌ ಇತ್ಯಾದಿ ನಡೆಯಲಿದೆ.

    ಫೆ. 27ರಂದು ನಡೆಯುವ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮೀಜಿ, ಜಮಖಂಡಿ ಮೂಲಸಿದ್ಧೇಶ್ವರ ಕ್ಷೇತ್ರದ ಶ್ರೀಸಿದ್ಧುಮುತ್ಯಾ, ನಂದಿಕುರುಳಿಯ ಶ್ರೀವೀರಭದ್ರ ಮಹಾಸ್ವಾಮಿ ಅವರ ದಿವ್ಯಸಾನ್ಙಿಧ್ಯ ಇರುವುದು. ಕೊಪ್ಪಳ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ತೋಟಪ್ಪ ಹನಮಂತಪ್ಪ ಕಾಮನೂರು ಅಧ್ಯಕ್ಷತೆ ವಹಿಸಲಿರುವರು.

    ನೂತನ ಭವನವನ್ನು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಲಿದ್ದು, ಸಚಿವರಾದ ಹಾಲಪ್ಪ ಆಚಾರ್, ಆನಂದ ಸಿಂಗ್ ಜ್ಯೋತಿ ಬೆಳಗಲಿರುವರು‌. ಸಂಸದ ಸಂಗಣ್ಣ ಕರಡಿ ಗಾಣಿಗ ಭವನ ಕಾರ್ಯಾಲಯ ಉದ್ಘಾಟಿಸಲಿರುವರು.
    ಸಂಸದ ಪಿ.ಸಿ.ಗದ್ದಿಗೌಡರ ಗಾಣದ ಕಣ್ಣಪ್ಪ ಪುತ್ಥಳಿ ಅನಾವರಣ ಮಾಡಲಿರುವರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಭವನದ ಮೊದಲ ಮತ್ತು ಎರಡನೇ ಮಹಡಿ ಉದ್ಘಾಟಿಸಲಿದ್ದಾರೆ.

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?

    ಸಂಬಂಧಿತ ಸುದ್ದಿ: ರಜತ ಮಹೋತ್ಸವ ಸಂಭ್ರಮದಲ್ಲಿ ‘ಸಂಪರ್ಕ ಸುಧಾ’

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!