ಬೆಂಗಳೂರು: ಮಂಗಳೂರು ಗುರುಪುರ ಕೈಕಂಬದ ಸಫಲ ಸೌಹಾರ್ದ ಸಹಕಾರಿ ನಿಯಮಿತದ ಪ್ರಥಮ ಶಾಖೆಯು ಮಾರ್ಚ್ 6ರಂದು ಮಂಗಳೂರಿನ ಬಿಕರ್ನಕಟ್ಟೆಯ ದತ್ತ ಗೋಕುಲ ಕಟ್ಟಡದಲ್ಲಿ ಉದ್ಘಾಟನೆ ಆಗಲಿದೆ.
ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ ಉಳಿಯ ಉಳ್ಳಾಲ ಕ್ಷೇತ್ರದಲ್ಲಿ ಶ್ರೀ ದೇವರುಗಳ ಪಾದಕಮಲದಲ್ಲಿ ಇಟ್ಟು ಕ್ಷೇತ್ರದ ಧರ್ಮದರ್ಶಿ ಪರಮಪೂಜ್ಯ ಶ್ರೀ ದೇವು ಮೂಲ್ಯನ್ನವರ ಪ್ರಾರ್ಥನೆ ಬಳಿಕ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಮೊದಲ ಆಮಂತ್ರಣ ಪತ್ರಿಕೆಯನ್ನು ಅವರಿಗೆ ನೀಡಿ ಪ್ರಥಮ ಶಾಖೆಯನ್ನು ದೀಪ ಬೆಳಗಿಸಿ ಕಚೇರಿ ಉದ್ಘಾಟಿಸುವಂತೆ ಆಹ್ವಾನಿಸಲಾಯಿತು. ಅಲ್ಲದೆ ಕ್ಷೇತ್ರದ ಗುರಿಕಾರ ರಾಜೇಶ್, ಕ್ಷೇತ್ರದ ಪದಾಧಿಕಾರಿಗಳನ್ನು ಕೂಡ ಆಮಂತ್ರಿಸಲಾಯಿತು.
ಈ ಸಂದರ್ಭದಲ್ಲಿ ಸಫಲ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷರಾದ ಪ್ರೇಮಾನಂದ ಸಾಲಿಯಾನ್, ನಿರ್ದೇಶಕ ವೆಂಕಟೇಶ್ ಕದ್ರಿ, ಗೌರವ ಸಲಹೆಗಾರ ಹರಿದಾಸ್, ಶಾಖಾ ಉಸ್ತುವಾರಿ ಸದಸ್ಯ ಕೂಸಪ್ಪ, ಪ್ರಭಾರ ಶಾಖಾಧಿಕಾರಿ ಜೆ.ಎಸ್. ಪ್ರವೀಣ್ ಉಪಸ್ಥಿತರಿದ್ದರು.
ಪ್ರಥಮ ಶಾಖೆಯ ಸಮಾರಂಭವನ್ನು ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಫಲ್ಯ ಮತ್ತು ಅವರ ಧರ್ಮಪತ್ನಿ ರತಿಕಾ ಶ್ರೀನಿವಾಸ್ ಉದ್ಘಾಟಿಸಲಿದ್ದು, ಆಹ್ವಾನ ನೀಡಿ ಆಮಂತ್ರಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೇಮಾನಂದ ಸಾಲಿಯಾನ್, ಗೌರವ ಸಲಹೆಗಾರ ಹರಿದಾಸ್, ನಿರ್ದೇಶಕ ವೆಂಕಟೇಶ ಕದ್ರಿ ಹಾಗೂ ಭಾಸ್ಕರ ಸಫಲಿಗ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ನಿಮಗೆ ಚುನಾವಣೆ ಗೆಲ್ಲಲು ಮೋದಿ ಹೆಸರು ಬೇಕು, ಗಾಣಿಗ ಸಮಾಜ ಬೇಡವೇ..?
ಸಂಬಂಧಿತ ಸುದ್ದಿ: ರಜತ ಮಹೋತ್ಸವ ಸಂಭ್ರಮದಲ್ಲಿ ‘ಸಂಪರ್ಕ ಸುಧಾ’