Saturday, September 21, 2024
spot_img
More

    Latest Posts

    ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ಸಫಲ್ಯ ಅವಿರೋಧ ಪುನರಾಯ್ಕೆ

    ಬೆಂಗಳೂರು: ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ಸಫಲ್ಯ ಅವರು ಅವಿರೋಧವಾಗಿ ಮರು ಆಯ್ಕೆ ಆಗಿದ್ದಾರೆ. ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ್ದ ಸೇವೆಯಿಂದಾಗಿ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

    ಎಂಬತ್ತು ವರ್ಷಗಳಿಂದ ಮುಂಬೈ ಮಹಾನಗರದಲ್ಲಿ ಅಸ್ತಿತ್ವ ಹೊಂದಿರುವ ಮುಂಬೈ ಸಾಫಲ್ಯ ಸೇವಾ ಸಂಘದ ವಾರ್ಷಿಕ ಸಭೆ ಇತ್ತೀಚೆಗೆ ನಡೆದಿದ್ದು, ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇದರಲ್ಲಿ ಶ್ರೀನಿವಾಸ ಸಫಲ್ಯ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಗೊಂಡರು.

    ಶೋಭಾ ಬಂಗೇರ ಪ್ರಧಾನ ಕಾರ್ಯದರ್ಶಿ, ಹೇಮಂತ್‌ ಸಫಲಿಗ ಕೋಶಾಧಿಕಾರಿ, ಕೃಷ್ಣ ಕುಮಾರ್ ಬಂಗೇರ ಉಪಾಧ್ಯಕ್ಷ, ಲೀಲಾ ಬಂಗೇರ ಮತ್ತು ರಾಜೇಶ್‌ ಪುತ್ರನ್‌ ಜೊತೆ ಕಾರ್ಯದರ್ಶಿ, ರವಿಕಾಂತ್‌ ಸಫಲಿಗ ಉಪಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.

    ಶ್ರೀನಿವಾಸ ಸಫಲ್ಯ

    ಭಾಸ್ಕರ್‌ ಟಿ. ಸಫಲಿಗ, ಜಗನ್ನಾಥ ಕರ್ಕೇರ, ಭಾಸ್ಕರ್‌ ಬಿ. ಸಫಲಿಗ, ಸಚಿನ್‌ ಸಾಲ್ಯಾನ್‌, ಸತೀಶ್‌ ಕುಂದರ್‌, ಕಿರಣ ಸಫಲಿಗ, ಮಹೇಶ್‌ ಬಂಗೇರ, ಜೀವನ್‌ ಶ್ರೀಯಾನ್‌, ಪದ್ಮಿನಿ ಬಂಗೇರ ಹಾಗೂ ಶೋಭಾ ಕರ್ಕೇರ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

    ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಕಲಾ ಬಂಗೇರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಮೆಂಡನ್‌, ಕಾರ್ಯದರ್ಶಿಯಾಗಿ ಉಷಾ ಸಫಲಿಗ, ಕೋಶಾಧಿಕಾರಿ ಪ್ರತಿಭಾ ಸಫಲಿಗ ಅವರ ಆಯ್ಕೆ ನಡೆಯಿತು.

    ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸಂಧ್ಯಾ ಪುತ್ರನ್‌, ಉಪಾಧ್ಯಕ್ಷರಾಗಿ ಕಾರ್ತಿಕ್‌ ಸೋಮೇಶ್ವರ, ಕಾರ್ಯದರ್ಶಿಯಾಗಿ ಶ್ವೇತಾ ಬಂಗೇರ, ಕೋಶಾಧಿಕಾರಿಯಾಗಿ ದಿಶಾ ಬಂಗೇರ ಅವರನ್ನು ಆಯ್ಕೆ ಮಾಡಲಾಯಿತು.

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಜಾನಪದ ತತ್ವ ಕಲಾವಿದೆ ಶರಣಮ್ಮಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ

    ಸಂಬಂಧಿತ ಸುದ್ದಿ: ಸಂಭ್ರಮ-ಸಾಧನೆ-ಸಂವಾದದಿ ಮೇಳೈಸಿತು ʼಸಂಪರ್ಕ ಸುಧಾʼ ರಜತ ಮಹೋತ್ಸವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!