ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಕುಮಟಾದ ಗಾಣಿಗ ಯುವ ಬಳಗವು ಮೂರನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ರವಿವಾರ ಅಂದರೆ ಆ. 7ರಂದು ಹಮ್ಮಿಕೊಂಡಿದ್ದು, ಅದೇ ದಿನ ಸ್ನೇಹಿತರ ದಿನವನ್ನೂ ಆಚರಿಸಲಿದೆ.
ಅಂದು ಕುಮಟಾದ ವೈಭವ ಪ್ಯಾಲೇಸ್ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ದಿನಕರ ಶೆಟ್ಟಿ ಅವರು ಉದ್ಘಾಟನೆ ಮಾಡಲಿದ್ದಾರೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ(ರಿ) ಉಪಾಧ್ಯಕ್ಷ ಗಜಾನನ ಶೆಟ್ಟಿ, ಹೊನ್ನಾವರದ ಹೊಸಾಕುಳಿ ಗ್ರಾಮಪಂಚಾಯತ್ ಸದಸ್ಯ ಸುರೇಶ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಂಬಂಧಿತ ಸುದ್ದಿ: 3 ದಶಕಗಳ ಸೇವೆ ಸಲ್ಲಿಸಿದ ಶಿಕ್ಷಕ ಗಣೇಶ್ ಅವರಿಗೆ ಪ್ರಣಾಮ ಸಪ್ತಾಹದ ಬೀಳ್ಕೊಡುಗೆ
ಸಂಬಂಧಿತ ಸುದ್ದಿ: ಬಾಲರ್ಕ ಫಿಟ್ನೆಸ್ ಟೀಮ್ ಚಾಂಪಿಯನ್; ಬಾಲರ್ಕ ಪವರ್ಲಿಫ್ಟರ್ಸ್ ಸ್ಟ್ರಾಂಗ್..
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ ಅಕಾಡೆಮಿಗೆ ಪ್ರವೇಶಾತಿ ಆರಂಭ; ಹೀಗಿದೆ ಕೊಡುಗೆ…