Sunday, September 22, 2024
spot_img
More

    Latest Posts

    ಗಾಣಿಗ ಸಮಾಜ ಯುವಕ ಮಂಡಳದಿಂದ ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ

    ಬೆಂಗಳೂರು: ಶಿರಸಿಯ ಗಾಣಿಗ ಸಮಾಜ ಯುವಕ ಮಂಡಳವು ಗಾಣಿಗ ಸಮಾಜದ ಮಕ್ಕಳಿಗಾಗಿ ರಾಜ್ಯಮಟ್ಟದ ಬಾಲಕೃಷ್ಣ ಸ್ಪರ್ಧೆ ಹಮ್ಮಿಕೊಂಡಿದ್ದು, ಆಸಕ್ತರು ಮಕ್ಕಳ ಕೃಷ್ಣವೇಷದ ಫೋಟೋಗಳನ್ನು ಕಳುಹಿಸುವ ಮೂಲಕ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

    ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಪ್ರಥಮ ಬಹುಮಾನವಾಗಿ 10,001 ರೂ., ದ್ವಿತೀಯ ಬಹುಮಾನವಾಗಿ 5,001 ರೂ., ತೃತೀಯ ಬಹುಮಾನವಾಗಿ 3,001 ರೂಪಾಯಿ ನೀಡಲಾಗುವುದು. ಅದೇ ರೀತಿ ಅತಿಹೆಚ್ಚು ಫೇಸ್‌ಬುಕ್‌ ಲೈಕ್‌ ಪಡೆದ 3 ಫೋಟೋಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

    ಸ್ಪರ್ಧೆಯಲ್ಲಿ ಭಾಗವಹಿಸಲು ಮಗುವಿನ ಭಾವಚಿತ್ರ, ಜನ್ಮದಾಖಲೆಯನ್ನು ಕೆಳಗೆ ತಿಳಿಸಿರುವ ಇ-ಮೇಲ್‌ ಐಡಿಗೆ ಮೇಲ್‌ ಮೂಲಕ ಅಥವಾ ಮೊಬೈಲ್‌ಫೋನ್‌ ನಂಬರ್‌ಗೆ ವಾಟ್ಸ್ಯಾಪ್‌ ಮೂಲಕ ಕಳಿಸಬಹುದು. 2016 ಆಗಸ್ಟ್‌ 15ರ ನಂತರ ಜನಿಸಿರುವ ಗಾಣಿಗ ಸಮಾಜದ ಮಕ್ಕಳು ಮಾತ್ರ ಇದರಲ್ಲಿ ಭಾಗವಹಿಸಬಹುದಾಗಿದ್ದು, ಫೋಟೋ ಕಳುಹಿಸಲು ಕೊನೆಯ ದಿನ ಇದೇ ಆಗಸ್ಟ್‌ 15. ಸ್ಪರ್ಧೆಯ ನೋಂದಣಿ ಶುಲ್ಕವಾಗಿ 150 ರೂ. ಪಾವತಿಸಬೇಕಾಗುತ್ತದೆ ಎಂದು ಯುವಕ ಮಂಡಳದ ಅಧ್ಯಕ್ಷ ಗಜಾನನ ಶೆಟ್ಟಿ ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗೆ ಸಂಪರ್ಕ

    ವಾಟ್ಸ್ಯಾಪ್:‌ 9742235344

    ಇ-ಮೇಲ್:‌ [email protected]

    ಸಂಬಂಧಿತ ಸುದ್ದಿ: ಗಾಣಿಗ ಯುವ ಬಳಗದಿಂದ ಇದೇ ರವಿವಾರ ಪ್ರತಿಭಾ ಪುರಸ್ಕಾರ, ಸ್ನೇಹಿತರ ದಿನಾಚರಣೆ

    ಸಂಬಂಧಿತ ಸುದ್ದಿ: ಗಾಣಿಗ-ಗಾಣಿಗೇರ್‌ ಬೇರೆಯಲ್ಲ, ಹಿಂದೂ ಲಿಂಗಾಯತ-ಗಾಣಿಗ ಲಿಂಗಾಯತ ಎರಡೂ ಒಂದೇ..

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!