Saturday, September 21, 2024
spot_img
More

    Latest Posts

    ಕೆನರಾ ಬ್ಯಾಂಕ್‌ನ ರತ್ನಾಕರ್ ಗಾಣಿಗರಿಗೆ ಗಾಣಿಗ ಸಮಾಜದಿಂದ ಸನ್ಮಾನ

    ಬೆಂಗಳೂರು: ಕೆನರಾ ಬ್ಯಾಂಕ್‌ನ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿ ಡಿವಿಜಿನಲ್ ಮ್ಯಾನೇಜರ್‌ನಂಥ ಉನ್ನತ ಹುದ್ದೆಗೇರಿ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ರತ್ನಾಕರ್ ಗಾಣಿಗ ಗಂಗೊಳ್ಳಿ ಇವರನ್ನು ಗಂಗೊಳ್ಳಿ ಗಾಣಿಗ ಸಮಾಜದ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಆಗಸ್ಟ್ 28ರ ರವಿವಾರ ಈ ಅಭಿನಂದನಾ ಸಮಾರಂಭ ನಡೆಯಿತು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ರತ್ನಾಕರ ಗಾಣಿಗರು, ನನಗೆ ದೊರಕಿದ ಹತ್ತು ಹಲವು ಸನ್ಮಾನಗಳಲ್ಲಿ ಹುಟ್ಟೂರಿನ ಈ ಸನ್ಮಾನ ಬಹಳ ವಿಶೇಷವಾದದ್ದು ಎಂದು ಸಂತಸ ವ್ಯಕ್ತಪಡಿಸಿದರು.

    ವೇದಿಕೆಯಲ್ಲಿ ರತ್ನಾಕರ ಗಾಣಿಗ ದಂಪತಿಗಳ ಜೊತೆಗೆ ಅತಿಥಿಗಳಾಗಿ ರಾಮಕೃಷ್ಣ ಗಾಣಿಗ ಹೆಮ್ಮಾಡಿ, ಶಿವಾನಂದ ಗಾಣಿಗ ಗಂಗೊಳ್ಳಿ, ಗುಜ್ಜಾಡಿ ದೈವಸ್ಥಾನದ ಪಾತ್ರಿಗಳಾದ ನಾಗಪ್ಪ ಗಾಣಿಗ ಕೊಡಪಾಡಿ, ಗಿರಿಧರ್ ಗಾಣಿಗ ಗಂಗೊಳ್ಳಿ ಹಾಗೂ ಸೇಲಂ ಉದ್ಯಮಿ ಮಂಜುನಾಥ್ ಗಾಣಿಗ ಗಂಗೊಳ್ಳಿ ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಸೀತಾರಾಮ ಗಾಣಿಗ ನಿರೂಪಿಸಿ, ಪ್ರಸ್ತಾವಿಕ ಭಾಷಣಗೈದರು. ಶ್ರೀಪತಿ ಗಂಗೊಳ್ಳಿ ಸ್ವಾಗತಿಸಿ ರತ್ನಾಕರ ಗಾಣಿಗರ ಸಾಧನೆಯ ಕುರಿತು ಮಾತನಾಡಿದರೆ, ಸುರೇಶ ಗಾಣಿಗ ಗಂಗೊಳ್ಳಿ ವಂದನಾರ್ಪಣೆ ಮಾಡಿದರು.

    ಸಂಬಂಧಿತ ಸುದ್ದಿ: ಗಂಗೊಳ್ಳಿ ದೇವಸ್ಥಾನದ ದೀಪೋತ್ಸವ ಸಮಿತಿ ಅಧ್ಯಕ್ಷರಾಗಿ ರತ್ನಾಕರ ಗಾಣಿಗ ಆಯ್ಕೆ

    ಸಂಬಂಧಿತ ಸುದ್ದಿ: ಭಾರತದ ಬಲಾಢ್ಯ ಪುರುಷನ ಬಾಲರ್ಕಕ್ಕೀಗ ಮತ್ತೊಂದು ತಾಣ, ಮತ್ತಷ್ಟು ತ್ರಾಣ…

    ಸಂಬಂಧಿತ ಸುದ್ದಿ: ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ನೂತನ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!