ಬೆಂಗಳೂರು: ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವ ಎಸ್ಜಿಇಸಿಟಿ ಅಕಾಡೆಮಿ ಜುಲೈ 31ರಂದು ಸಚಿವ ಕೆ. ಗೋಪಾಲಯ್ಯ ಅವರಿಂದ ಉದ್ಘಾಟನೆಗೊಂಡಿದ್ದು, ಈಗಾಗಲೇ ಪ್ರವೇಶಾತಿ ಆರಂಭಗೊಂಡಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ಗಣೇಶ್ ಬ್ಲಾಕ್ನ ಜೆ.ಬಿ. ಕಾವಲ್ನ ನಂ. 14/5ರಲ್ಲಿನ ಎಸ್ಜಿಇಸಿಟಿ ಕಚೇರಿಯಲ್ಲಿ ಈ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿಯಡಿ ಈ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ.
ಕಂಪ್ಯೂಟರ್ ತರಬೇತಿ ನೀಡಲೆಂದೇ ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವ ಎಸ್ಜಿಇಸಿಟಿ ಅಕಾಡೆಮಿಯಲ್ಲಿ ಕೌಶಲ್ಯ ಒದಗಿಸುವ ವಿವಿಧ ಕೋರ್ಸ್ಗಳನ್ನು ನಡೆಸಲಾಗುತ್ತಿದೆ. ವಿಶೇಷವೆಂದರೆ ಇಲ್ಲಿ ಕೋರ್ಸ್ ಪಡೆಯುವ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ಶೇ. 50 ರಿಯಾಯಿತಿ ನೀಡಲಾಗುವುದು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ನಾಗರಾಜ ಶೆಟ್ಟಿ ತಿಳಿಸಿದ್ದಾರೆ.
ಕೋರ್ಸ್ ಕುರಿತ ಮಾಹಿತಿ, ಸಂಪರ್ಕ ವಿವರ ಇತ್ಯಾದಿ ಈ ಕೆಳಗಿನಂತಿವೆ..
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ ಅಕಾಡೆಮಿಗೆ ಪ್ರವೇಶಾತಿ ಆರಂಭ; ಹೀಗಿದೆ ಕೊಡುಗೆ…
ಸಂಬಂಧಿತ ಸುದ್ದಿ: ಕೆನರಾ ಬ್ಯಾಂಕ್ನ ರತ್ನಾಕರ್ ಗಾಣಿಗರಿಗೆ ಗಾಣಿಗ ಸಮಾಜದಿಂದ ಸನ್ಮಾನ
ಸಂಬಂಧಿತ ಸುದ್ದಿ: ಸಚಿವ ಗೋಪಾಲಯ್ಯ ಅವರಿಂದ ಎಸ್ಜಿಇಸಿಟಿ ಅಕಾಡೆಮಿ ಉದ್ಘಾಟನೆ