Saturday, September 21, 2024
spot_img
More

    Latest Posts

    ಶ್ರೀಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಗೆ ಸಾಹುದ್ವಯರ ಭೇಟಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋಟೆ ಆವರಣದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಗೆ ಸಾಹುದ್ವಯರು ಭೇಟಿ ನೀಡಿದ್ದಾರೆ. ಅಂದರೆ, ಸಾಹು ಚೌಪಲ್‌ನ ರಾಷ್ಟ್ರೀಯ ಅಧ್ಯಕ್ಷ ಕೃಷ್ಣಕುಮಾರ್‌ ಸಾಹು ಹಾಗೂ ಹೈದರಾಬಾದ್‌ನ ಲಾವಣ್ಯ ಗ್ಲೋಬಲ್‌ ಕರಿಯರ್‌ ಪ್ಲ್ಯಾನರ್‌ನ ಅಶೋಕ್‌ಕುಮಾರ್‌ ಸಾಹು ಅವರು ಎಸ್‌ಎಲ್‌ಎನ್‌ ಚಾರಿಟೀಸ್‌ಗೆ ಭೇಟಿ ನೀಡಿದರು.

    ಶ್ರೀಗಾಣಿಗ ಎಜುಕೇಷನಲ್‌ ಆ್ಯಂಡ್ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ನಿರ್ದೇಶಕ ಆರ್.ನಾಗರಾಜ ಶೆಟ್ಟಿ ಅವರೊಂದಿಗೆ ಇವರಿಬ್ಬರು ಶ್ರೀ.ಲ.ನ.ಧರ್ಮಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಮಹತ್ವದ ಸಾಮಾಜಿಕ ಕಾರ್ಯಗಳ ಕುರಿತು ಮಾಹಿತಿ ಪಡೆದರು.

    ಬಳಿಕ ಎಸ್‌ಜಿಇಸಿಟಿ ಟ್ರಸ್ಟ್‌ನ ನೂತನ ಎಸ್‌ಜಿಇಸಿಟಿ ಅಕಾಡೆಮಿಗೂ ಕೃಷ್ಣಕುಮಾರ್‌ ಸಾಹು ಹಾಗೂ ಅಶೋಕ್‌ಕುಮಾರ್‌ ಸಾಹು ಭೇಟಿ ನೀಡಿದರು. ಗಾಣಿಗ ಸಮಾಜದಲ್ಲಿನ ಶೈಕ್ಷಣಿಕ ಹಾಗೂ ಔದ್ಯೋಗಿಕ ವಿಚಾರಗಳ ಕುರಿತು ಈ ಸಂದರ್ಭದಲ್ಲಿ ಮಾತುಕತೆ ನಡೆಸಿದ್ದು, ಮುಂದೆ ಇವರು ಸಮಾಜಕ್ಕೆ ಫಲಪ್ರದವಾಗಿ ಪರಿಣಮಿಸಲಿವೆ ಎಂಬುದಾಗಿ ನಾಗರಾಜ ಶೆಟ್ಟಿ ತಿಳಿಸಿದ್ದಾರೆ. ಈ ಸಂದರ್ಭಲ್ಲಿ ಎಸ್‌ಜಿಇಸಿಟಿ ಅಕಾಡೆಮಿಯ ಮುಖ್ಯಸ್ಥ ನಾಗಭೂಷಣ್‌ ಅವರು ಉಪಸ್ಥಿತರಿದ್ದರು.

    ಎಸ್‌ಜಿಇಸಿಟಿ ಅಕಾಡೆಮಿಯಲ್ಲಿ ಕೃಷ್ಣಕುಮಾರ್‌ ಸಾಹು ಮತ್ತಿತರರು.

    ಸಂಬಂಧಿತ ಸುದ್ದಿ: ಅಖಿಲ ಭಾರತ ತೈಲಿಕ್ ಸಾಹು ಮಹಾಸಭಾ ಅಧ್ಯಕ್ಷೆ ಡಾ.ಮಮತಾ ಸಾಹುಗೆ ಸನ್ಮಾನ

    ಸಂಬಂಧಿತ ಸುದ್ದಿ: ಪಂಜಾಬ್​ನಲ್ಲಿನ ಸಾಹು ಚೌಪಾಲ್ ಕಾರ್ಯಗಳು ಮನೆಮನೆಗೂ ತಲುಪಲಿ

    ಸಂಬಂಧಿತ ಸುದ್ದಿ: ಅಸ್ಸಾಂ ಸಿವಿಲ್ ಸರ್ವಿಸ್ ಅಧಿಕಾರಿಯಾಗಿ ನಮ್ರತಾ ಸಾಹು

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!