Saturday, September 21, 2024
spot_img
More

    Latest Posts

    ಗಾಣಿಗ ಯುವ ಬಳಗದಿಂದ ಶಕ್ತಿದೇವತೆಗೆ ನವರಾತ್ರಿ ಉತ್ಸವ ಪೂಜೆ

    ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶಕ್ತಿದೇವತೆ ನೆಲ್ಲಿಕೇರಿಯ ಪುರದೀಶ್ವರಿ ಮಹಾಸತಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆದಿದ್ದು, ಗಾಣಿಗ ಯುವ ಬಳಗದಿಂದಲೂ ಪೂಜೆ ನೆರವೇರಿದೆ.

    ಕುಮಟಾ ಗಾಣಿಗ ಯುವ ಬಳಗವು ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವದ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡಿದ್ದು, ದೇವಿಗೆ ಪೂಜೆಯನ್ನು ಅರ್ಪಿಸಿದೆ. ವಿಜಯದಶಮಿ ದಿನವಾದ ಅ. 5ರ 8-30ರಿಂದ ಪೂಜೆ ಪ್ರಾರಂಭವಾಗಿ ಸಂಪನ್ನಗೊಂಡಿತು.  

    ಪುರದೀಶ್ವರಿ ಸನ್ನಿಧಾನದಲ್ಲಿ ನಡೆದ ಈ ಶರನ್ನವರಾತ್ರಿಯ ಮಹಾಪೂಜೆಯಲ್ಲಿ ಗಾಣಿಗ ಯುವ ಬಳಗದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಆಗಮಿಸಿ ಜಗನ್ಮಾತೆಯ ಅನುಗ್ರಹಕ್ಕೆ ಪಾತ್ರರಾದರು.

    ಸಂಬಂಧಿತ ಸುದ್ದಿ: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್‌. ಸುದರ್ಶನ್‌ ರಾಜೀನಾಮೆ; ಕಾರಣ ಮಹತ್ವದ್ದು..

    ಸಂಬಂಧಿತ ಸುದ್ದಿ: ಗಾಣಿಗ ನಿಗಮ-ಮಂಡಳಿಗಾಗಿ ಮೋದಿಯ ಸೆಳೆಯುವತ್ತ ಗಾಣಿಗ ಮುಖಂಡರ ಚಿತ್ತ

    ಸಂಬಂಧಿತ ಸುದ್ದಿ: ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಅವಳಿ ಸಹೋದರಿಯರಿಗೆ ಎರಡು ಚಿನ್ನದ ಪದಕ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!