Sunday, September 22, 2024
spot_img
More

    Latest Posts

    ಇದೇ ರವಿವಾರ ಅಖಿಲ ಕರ್ನಾಟಕ ಗಾಣಿಗ ಮಹಾಸಮ್ಮೇಳನ..

    ಬೆಂಗಳೂರು: ಗಾಣಿಗ ಜ್ಯೋತಿ ಮಾಸಪತ್ರಿಕೆ ವತಿಯಿಂದ ಇದೇ ರವಿವಾರ ಅಖಿಲ ಕರ್ನಾಟಕ ಗಾಣಿಗ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಅ.23ರ ರವಿವಾರ ಬೆಳಗ್ಗೆ 10 ಗಂಟೆಗೆ ಈ ಸಮ್ಮೇಳನ ನಡೆಯಲಿದೆ.

    ಗಾಣಿಗ ಸಮಾಜ ಅಭಿವೃದ್ಧಿ ನಿಗಮ ಮಂಡಳಿಗಾಗಿ ಹಕ್ಕೊತ್ತಾಯ, ಗಾಣಿಗ ಸಮಾಜದ ಒಗ್ಗಟ್ಟಿಗಾಗಿ ಪ್ರಮಾಣ ವಚನ, ಸಮಾಜದ ಸಾಧಕ ಮಹನೀಯರಿಗೆ ರಾಜ್ಯ ಮಟ್ಟದ ಗಾಣಿಗ ಜ್ಯೋತಿ ಪ್ರಶಸ್ತಿ ಪ್ರದಾನ, ಪತ್ರಿಕೆಯ ಪ್ರತಿನಿಧಿಗಳಿಗೆ ಆಯ್ಕೆಪತ್ರ ವಿತರಣೆ, ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ.

    ಅಲ್ಲದೆ ಪತ್ರಿಕೆಯ ಪೋಷಕರಿಗೆ, ಆಜೀವ ಸದಸ್ಯರಿಗೆ, ಸಲಹಾ ಮಂಡಳಿಯ ಸದಸ್ಯರು, ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ.

    ಗಾಣಿಗ ಜ್ಯೋತಿ ಪತ್ರಿಕೆಯ ಪ್ರಧಾನ ಸಂಪಾದಕಿ ಜ್ಯೋತಿ ಚಂದ್ರಶೇಖರ, ಕಾರ್ಯನಿರ್ವಾಹಕ ಸಂಪಾದಕ ಚಂದ್ರಶೇಖರ ಮಾಡಲಗೇರಿ, ಸಲಹಾ ಸಮಿತಿ ಮಂಡಳಿಯ ಎಲ್‌.ಐ. ಲಕ್ಕಮ್ಮನವರ, ರವಿಶಂಕರ ಗಡಿಯಪ್ಪನವರ, ಎಂ.ಎಸ್.‌ ಗಾಣಿಗೇರ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    ಸಂಬಂಧಿತ ಸುದ್ದಿ: ಶೀಘ್ರದಲ್ಲೇ ಗಾಣಿಗ ನಿಗಮ-ಮಂಡಳಿಗಾಗಿ ಬೃಹತ್‌ ಹೋರಾಟ; ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

    ಸಂಬಂಧಿತ ಸುದ್ದಿ: ಕಾರ್ತಿಕ ಮಾಸ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದಲೇ ಪ್ರಥಮ ಪೂಜೆ

    ಸಂಬಂಧಿತ ಸುದ್ದಿ: ರಾಜ್ಯೋತ್ಸವ ಕೊಡುಗೆ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಿಲ್ಲಿ ಕಂಪ್ಯೂಟರ್‌ ಕೋರ್ಸ್‌ ಉಚಿತ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!