ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಶಿರಸಿಯ ಯಲ್ಲಾಪುರ ರಸ್ತೆಯಲ್ಲಿರುವ ಗಾಣಿಗ ಸಮಾಜ ಅಭಿವೃದ್ಧಿ ಸಮಿತಿಯ ವಾರ್ಷಿಕ ಮಹಾಸಭೆ ಮುಂದಿನ ರವಿವಾರ ನಡೆಯಲಿದೆ.
ಈ ಸಮಿತಿಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಅ. 30ರ ರವಿವಾರ ಮಧ್ಯಾಹ್ನ 3 ಗಂಟೆಗೆ ಶಿರಸಿಯ ಗಾಣಿಗ ಸಮುದಾಯ ಭವನದಲ್ಲಿ ನಡೆಸಲಿದ್ದು, ಸಂಘದ ಅಧ್ಯಕ್ಷ ಚಂದ್ರಶೇಖರ ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಿತಿಯ 2021-22ನೇ ಸಾಲಿನ ಆಡಿಟ್ ಆದ ಜಮಾ ಖರ್ಚು, ಆಯವ್ಯಯ ಪತ್ರ ಕುರಿತಂತೆ 2022ರ ಮಾ. 31ಕ್ಕೆ ಇದ್ದಂತೆ ಅಢಾವೆ ಪತ್ರಿಕೆಯನ್ನು ಪರಿಶೀಲಿಸಿ ಮಂಜೂರು ನೀಡುವುದು, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ 2021-22ನೇ ಸಾಲಿನ ಅಡಿಟ್ ಆದ ಜಮಾ ಖರ್ಚು, ಆಯವ್ಯಯ ಪತ್ರ ಹಾಗೂ 2022ರ ಮಾ. 31ಕ್ಕೆ ಇದ್ದಂತೆ ಅಢಾವೆ ಪತ್ರಿಕೆಯನ್ನು ಪರಿಶೀಲಿಸಿ ಮಂಜೂರು ನೀಡುವುದು ನಡೆಯಲಿದೆ.
ಸಮುದಾಯ ಭವನ ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಅಭಿವೃದ್ಧಿ, ಕಾರ್ಯ ವ್ಯವಹಾರಗಳ ಸುಧಾರಣೆ ಕುರಿತು ಏನಾದರೂ ಸಲಹೆ- ಸೂಚನೆಗಳಿದ್ದಲ್ಲಿ ಪರಿಶೀಲನೆ, 2023ರಲ್ಲಿ ಜರುಗಿಸಬೇಕಾದ ದೇವಸ್ಥಾನದ ವಾರ್ಷಿಕ ವರ್ಧಂತಿ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತದ ಕಾರ್ಯಕ್ರಮದ ಬಗ್ಗೆ ಚರ್ಚಿಸುವುದು ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಜ್ಯೋತಿ ಲಕ್ಷ್ಮಣ ಶೆಟ್ಟಿ ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಇದೇ ರವಿವಾರ ಅಖಿಲ ಕರ್ನಾಟಕ ಗಾಣಿಗ ಮಹಾಸಮ್ಮೇಳನ..
ಸಂಬಂಧಿತ ಸುದ್ದಿ: ಶೀಘ್ರದಲ್ಲೇ ಗಾಣಿಗ ನಿಗಮ-ಮಂಡಳಿಗಾಗಿ ಬೃಹತ್ ಹೋರಾಟ; ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
ಸಂಬಂಧಿತ ಸುದ್ದಿ: ರಾಜ್ಯೋತ್ಸವ ಕೊಡುಗೆ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಿಲ್ಲಿ ಕಂಪ್ಯೂಟರ್ ಕೋರ್ಸ್ ಉಚಿತ