ಬೆಂಗಳೂರು: ಗಾಣಿಗ ಸಮಾಜಕ್ಕೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕುಮಟಾ ಗಾಣಿಗ ಯುವ ಬಳಗವು ಧಾರ್ಮಿಕವಾಗಿಯೂ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಆ ಪೈಕಿ ಕಾರ್ತಿಕ ದೀಪೋತ್ಸವವೂ ಪ್ರಮುಖವಾದುದು.
ಗಾಣಿಗ ಸಮಾಜದ ಪುರಾತನ ದೇವಾಲಯವಾದ ಚಿತ್ರಗಿ ಶ್ರೀರಾಮಚಂದ್ರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೀಪೋತ್ಸವ ನಡೆಯಲಿದೆ. ಕುಮಟಾ ಗಾಣಿಗ ಯುವ ಬಳಗವು ನಾಲ್ಕನೇ ವರ್ಷದ ಈ ದೀಪೋತ್ಸವವನ್ನು ನ. 19ರಂದು ಹಮ್ಮಿಕೊಂಡಿದೆ.
ಶ್ರೀರಾಮಚಂದ್ರ ದೇವರ ಸನ್ನಿಧಿಯಲ್ಲಿ ನ.19ರ ಶನಿವಾರ ರಾತ್ರಿ ದೀಪೋತ್ಸವ ನಡೆಯಲಿದ್ದು, ಅದಕ್ಕೂ ಮೊದಲು ಸಂಜೆ 6ಕ್ಕೆ ಶ್ರೀ ಮಾರುತಿ ಭಜನಾ ಮಂಡಳಿಯವರಿಂದ ಭಕ್ತಿ ಸಂಗೀತ ಇರಲಿದೆ. ರಾತ್ರಿ 8 ಗಂಟೆಗೆ ಶ್ರೀರಾಮಚಂದ್ರ ದೇವರ ಸನ್ನಿಧಿಯಲ್ಲಿ ಮಹಾಮಂಗಳಾರತಿ ಜರುಗಲಿದ್ದು, ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಈ ದೇವತಾ ಕಾರ್ಯದಲ್ಲಿ ಸಮಾಜ ಬಾಂಧವರು ಹಾಗೂ ಬಳಗದ ಪ್ರೋತ್ಸಾಹಕರು ಹಾಗೂ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಗಾಣಿಗ ಯುವ ಬಳಗ ಮನವಿ ಮಾಡಿಕೊಂಡಿದೆ.
ಕಾರ್ತಿಕ ದೀಪೋತ್ಸವಲ್ಲಿ ಸೇವಾ ಕಾಣಿಕೆ ಹಾಗೂ ದೀಪದ ಎಣ್ಣೆ ನೀಡುವವರು ಗಣಪತಿ ಶೆಟ್ಟಿ: 9742919507, ಗಣೇಶ ಶೆಟ್ಟಿ: 9620504392 ಅಥವಾ ಗೌತಮ್ ಶೆಟ್ಟಿ: 9611342179 ಅವರನ್ನು ಸಂಪರ್ಕಿಸಬಹುದು ಎಂದು ಬಳಗವು ತಿಳಿಸಿದೆ.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಶ್ರೀವೇಣುಗೋಪಾಲಕೃಷ್ಣ ಎಜುಕೇಷನಲ್ ಸೊಸೈಟಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ
ಸಂಬಂಧಿತ ಸುದ್ದಿ: ಸೋಮಕ್ಷತ್ರಿಯ ಗಾಣಿಗ ಸಮಾಜದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ