Saturday, September 21, 2024
spot_img
More

    Latest Posts

    ಬಸ್ರೂರು ಗಾಣಿಗ ಯುವ ಸಂಘಟನೆಯ 9ನೇ ವಾರ್ಷಿಕೋತ್ಸವ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಿಟ್ ವಿತರಣೆ

    ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಸ್ರೂರು ಗಾಣಿಗ ಯುವ ಸಂಘಟನೆಯ 9ನೇ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಬಸ್ರೂರಿನ ನಿವೇದಿತಾ ಪ್ರೌಢಶಾಲೆಯಲ್ಲಿ ಆ.20ರಂದು ಈ ಸಮಾರಂಭ ನೆರವೇರಿತು.

    ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಸತೀಶ್ ಗಾಣಿಗ, ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಆರೋಗ್ಯ ಇಲಾಖೆಯ ಬ್ರಹ್ಮಾವರ ತಾಲೂಕು ಹಿರಿಯ ಮೇಲ್ವಿಚಾರಕ ಆಲಂದೂರು ಮಂಜುನಾಥ ಗಾಣಿಗ, ಉದ್ಯಮಿ ಮಂಜುನಾಥ್ ಗಾಣಿಗ ಸೇಲಂ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಸ್ರೂರು ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಗಾಣಿಗ ಕಂಡ್ಲೂರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಸತೀಶ್‌ ಗಾಣಿಗ ಅವರಿಂದ ಕಾರ್ಯಕ್ರಮದ ಉದ್ಘಾಟನೆ
    ಉದ್ಯಮಿ ಮಂಜುನಾಥ ಗಾಣಿಗ ಸೇಲಂ ಮತ್ತು ಪ್ರಮೋದ್‌ ಗಾಣಿಗ ಅವರಿಗೆ ಸನ್ಮಾನ

    ಮಕ್ಕಳಲ್ಲಿ ಏಕಾಗ್ರತೆ ಹಾಗೂ ಕಲಿಕಾ ಆಸಕ್ತಿ ಮೂಡಿಸುವಲ್ಲಿ ಯೋಗದ ಕೊಡುಗೆಯ ಕುರಿತು ಯೋಗಗುರು, ಹೆಸ್ಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಂಜೀವ ಮಾಸ್ಟರ್ ಮಾಹಿತಿ ಕಾರ್ಯಾಗಾರ ನಡೆಸಿದರು. ವಿವಿಧ ತರಗತಿಗಳ ಹಲವು ಮಕ್ಕಳಿಗೆ ಇದೇ ವೇಳೆ ಎಜುಕೇಷನಲ್ ಕಿಟ್ ವಿತರಣೆ ಮಾಡಲಾಯಿತು.

    ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

    ತಮಿಳುನಾಡಿನ ಸೇಲಮ್‌ನಲ್ಲಿರುವ ಉದ್ಯಮಿ ಮಂಜುನಾಥ್ ಗಾಣಿಗ ಗಂಗೊಳ್ಳಿ, ಮುಂಬೈನಲ್ಲಿರುವ ಉದ್ಯಮಿ ಗೋಪಾಲಕೃಷ್ಣ ಗೋವಿಂದ ಗಾಣಿಗ ಗಂಗೊಳ್ಳಿ, ಇಸ್ಕಾನ್ ಟ್ರಸ್ಟೀ ಆಗಿರುವ ಬೆಂಗಳೂರಿನ ಸಂದೇಶ್ ಟೈಲರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪ್ರಜ್ವಲ್ ಪ್ರಮೋದ್ ಗಾಣಿಗ ಗಂಗೊಳ್ಳಿ ಇವರು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.

    ಮಕ್ಕಳಿಗೆ ಎಜುಕೇಷನಲ್‌ ಕಿಟ್‌ ವಿತರಣೆ
    ಮಕ್ಕಳಿಗೆ ಎಜುಕೇಷನಲ್‌ ಕಿಟ್‌ ವಿತರಣೆ

    ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..

    ಸಂಬಂಧಿತ ಸುದ್ದಿ: ಮಂತ್ರಾಲಯದಲ್ಲಿ ಶ್ರೀಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ; ದರ್ಶನಕ್ಕೆ ತೆರಳಲಿದೆ ಗಾಣಿಗ ಯುವ ಬಳಗ

    ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!