ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ, ಮಾಜಿ ಸಭಾಪತಿ ಕೂಡ ಆಗಿರುವ ವಿ.ಆರ್. ಸುದರ್ಶನ್ ಅವರ ನೇತೃತ್ವದಲ್ಲಿ ಗಾಣಿಗ ಸಮುದಾಯದವರ ನಿಯೋಗ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ಸೆ. 1ರ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಈ ನಿಯೋಗ ಗಾಣಿಗ ಸಮಾಜದ ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದಲ್ಲದೆ, ಕೆಲವು ಸಮಸ್ಯೆಗಳ ಪರಿಹಾರದ ಕುರಿತು ಕೂಡ ಮನವಿ ಮಾಡಿಕೊಂಡಿತು.
ಸಂಬಂಧಿತ ಸುದ್ದಿ: ಸಣ್ಣ ಸಮುದಾಯ ಹಿಂದುಳಿಯಲು ದ್ವಿಮುಖ ನೀತಿ ಕಾರಣ: ಮಾಜಿ ಸಭಾಪತಿ ವಿ.ಆರ್. ಸುದರ್ಶನ್
ಗಾಣಿಗ ಸಮಾಜದ ನಾಯಕರಾಗಿರುವ ವಿ.ಆರ್.ಸುದರ್ಶನ್ ಗಾಣಿಗ ಸಮಾಜದ ಚಟುವಟಿಕೆಗಳಲ್ಲಿ ಆಗಾಗ ಭಾಗಿ ಆಗುವುದಲ್ಲದೆ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ, ಸಹಕಾರ-ಸಹಾಯ ಒದಗಿಸುತ್ತ ಬಂದಿದ್ದಾರೆ. ಇದೀಗ ಅವರದೇ ಪಕ್ಷದ ಸರ್ಕಾರ ಇರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮಾಜದವರಿಗೆ ತಮ್ಮಿಂದಾಗುವ ಸಹಾಯ-ಸಹಕಾರ ಒದಗಿಸಲು ಯತ್ನಿಸಿದ್ದಾರೆ.
ಸಂಬಂಧಿತ ಸುದ್ದಿ: ಅಖಿಲ ಕರ್ನಾಟಕ ಗಾಣಿಗರ ಸಂಘದ ಕೇಂದ್ರ ಕಚೇರಿಗೆ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಭೇಟಿ
ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್ ಮತ್ತು ಇತರ ಪದಾಧಿಕಾರಿಗಳು, ಯತೀಶ್ಕುಮಾರ್ ಗಾಣಿಗ ಮುಂತಾದವರು ಈ ನಿಯೋಗದಲ್ಲಿದ್ದರು.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಯಾರಾಗುತ್ತಾರೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಚೊಚ್ಚಲ ಅಧ್ಯಕ್ಷ?
ಸಂಬಂಧಿತ ಸುದ್ದಿ: ಎಸ್ಜಿಇಸಿಟಿಯಿಂದ ಜ್ಞಾನಜ್ಯೋತಿ ಯೋಗ ಅಧ್ಯಯನ ಕೇಂದ್ರ ಆರಂಭ