Saturday, September 21, 2024
spot_img
More

    Latest Posts

    ತಿರುಪತಿ ವೆಂಕಟೇಶ್ವರನಾಗಿ ಕಂಗೊಳಿಸಿದ ಬಾರ್ಕೂರು ವೇಣುಗೋಪಾಲಕೃಷ್ಣ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ಶುಕ್ರವಾರ ಪುರಾಣಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರನಾಗಿ ಕಂಗೊಳಿಸಿದ್ದಾನೆ. ಅರ್ಥಾತ್, ವೈಕುಂಠ ಏಕಾದಶಿ ಪ್ರಯುಕ್ತ ಸೋಮಕ್ಷತ್ರಿಯ ಗಾಣಿಗ ಸಮಾಜದವರು ತಮ್ಮ ಕುಲದೇವರಾದ ಶ್ರೀ ವೇಣುಗೋಪಾಲಕೃಷ್ಣನಿಗೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯಂತೆ ಅಲಂಕಾರ ಮಾಡಿಸಿ ಆರಾಧಿಸಿದ್ದಾರೆ.

    ಇದರೊಂದಿಗೆ ವೈಕುಂಠ ಏಕಾದಶಿಯ ಪ್ರಮುಖ ವಿಶೇಷ ಧಾರ್ಮಿಕ ಸೇವೆಗಳು ಜರುಗಿದ್ದಲ್ಲದೆ, ಹದಿನಾರು ಗಂಟೆಗಳ ಸತತ ಭಜನಾ ಸೇವೆ ಪ್ರಮುಖ ಆಕರ್ಷಣೆಯಾಗಿತ್ತು. ಕುಲಬಾಂಧವರು ಮಾತ್ರವಲ್ಲದೆ ಸುತ್ತಮುತ್ತಲ ಹತ್ತಕ್ಕೂ ಅಧಿಕ ಭಜನಾ ತಂಡಗಳ ಸದಸ್ಯರು ಇದರಲ್ಲಿ ಪಾಲ್ಗೊಂಡು ದೇವರನಾಮ ಸ್ಮರಣೆ ಮಾಡಿದ್ದಲ್ಲದೆ ಶ್ರೀದೇವರ ಕೃಪೆಗೂ ಪಾತ್ರರಾದರು. ಭಜನಾ ಸೇವೆಯು ಬೆಳಗ್ಗೆ 8:00ಕ್ಕೆ ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆ ಬಳಿಕ ಸಮಾಜ ಬಾಂಧವರ ಭಜನಾ ಕುಣಿತ ಮೂಲಕ ಚಾಲನೆ ಪಡೆಯಿತು.

    ಶ್ರೀ ವೆಂಕಟೇಶ್ವರ ಅಲಂಕಾರದಲ್ಲಿ ಶ್ರೀ ವೇಣುಗೋಪಾಲಕೃಷ್ಣ
    ದೇವಸ್ಥಾನದ ಪೌಳಿಯಲ್ಲಿ ಪೂಜಾ ಸಿದ್ಧತೆ

    ಫಲಾಹಾರ ಸೇವಾಕರ್ತರು: ಕುಲದೇವರ ಸನ್ನಿಧಾನದಲ್ಲಿ ಜರುಗುವ ಈ ಭಜನಾ ಕಾರ್ಯಕ್ರಮಕ್ಕೆ ಫಲಹಾರದ ವೆಚ್ಚವನ್ನು ಬೆಂಗಳೂರಿನ ಪ್ರತಿಷ್ಠಿತ ವೈಭವ್ ಹೋಟೆಲ್‌ ಮಾಲೀಕರು ಹಾಗೂ ಬೆಂಗಳೂರಿನ ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ.) ಇದರ ಗೌರವಾಧ್ಯಕ್ಷರೂ ಆಗಿರುವ ಬಿ.ಎಸ್. ಮಂಜುನಾಥ್ ಮತ್ತು ಪ್ರೇಮಾ ಮಂಜುನಾಥ್ ದಂಪತಿ ಭರಿಸಿದ್ದಾರೆ.

    ಉಡುಪಿ ಸೋಮಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಕೆ.ಗೋಪಾಲ್ ಅವರಿಂದ ಅನ್ನಪೂರ್ಣೇಶ್ವರಿ ಮಹಿಳಾ ಬಳಗಕ್ಕೆ ಗೌರವ ಪ್ರಸಾದ
    ಪ್ರಸಾದ ಗೌರವ ಸ್ವೀಕರಿಸಿದ ದುರ್ಗಾಪರಮೇಶ್ವರಿ ಭಜನಾ ಬಳಗ
    ಮಾಸ್ತಿದುರ್ಗಾ ಭಜನಾ ಬಳಗಕ್ಕೆ ವೆಂಕಟೇಶ್ವರ ಪ್ರಸಾದ ಗೌರವ
    ರಾಮಚಂದ್ರ ಮಹಿಳಾ ಭಜನಾ ಬಳಗಕ್ಕೆ ಗೌರವ ಪ್ರಸಾದ
    ರಾಮಾಮೃತ ಭಜನಾ ತಂಡಕ್ಕೆ ಪ್ರಸಾದ ಗೌರವ
    ಸಂಕೀರ್ತನ ಬಳಗಕ್ಕೆ ಗೌರವ ಪ್ರಸಾದ
    ಸೋಮಲಿಂಗೇಶ್ವರ ಮಹಿಳಾ ಭಜನಾ ಬಳಗಕ್ಕೆ ಗೌರವ ಪ್ರಸಾದ
    ವಿಷ್ಣು ಭಜನ್ಸ್ ಬಳಗಕ್ಕೆ ಪ್ರಸಾದ ಗೌರವ
    ಮಟಪಾಡಿ ಭಜನಾ ತಂಡಕ್ಕೆ ವೆಂಕಟೇಶ್ವರ ಪ್ರಸಾದ ಗೌರವ
    ವೇಣುಗೋಪಾಲಕೃಷ್ಣ ಯುವಕ ಸಂಘಕ್ಕೆ ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ.ರಾವ್ ಅವರಿಂದ ಪ್ರಸಾದ ಗೌರವ.
    ಭಕ್ತರಿಗೆ ಉಪಾಹಾರ ವ್ಯವಸ್ಥೆ

    ಪುಷ್ಪಾಲಂಕಾರ ಸೇವಾಕರ್ತರು: ಕುಲದೇವರ ವಿಶೇಷವಾದ ಪುಷ್ಪಾಲಂಕಾರ ಸೇವೆ ತಗುಲಿದ ವೆಚ್ಚವನ್ನು ಬೆಂಗಳೂರಿನ ಉದ್ಯಮಿ ಪ್ರಶಾಂತ್ ವೆಂಕಟರಮಣ ಮತ್ತು ಜ್ಯೋತಿ ಪ್ರಶಾಂತ್ ದಂಪತಿ ನೀಡಿದ್ದಾರೆ.

    ತಿರುಪತಿ ಲಡ್ಡು ಸೇವಾಕರ್ತರು: ಭಕ್ತರಿಗೆ ತಿರುಪತಿ ಲಡ್ಡು ಪ್ರಸಾದ ವಿತರಿಸಲಾಗಿದ್ದು, ಈ ಸೇವೆಯ ವೆಚ್ಚವನ್ನು ಉಡುಪಿ ಸೋಮಕ್ಷತ್ರಿಯ ಗಾಣಿಗ ಸಂಘದ ಅಧ್ಯಕ್ಷ ಕೆ.ಗೋಪಾಲ್ ಅವರ ಪುತ್ರ ಉದ್ಯಮಿ ಉಡುಪಿಯ ಕೆ. ವಿಜಯ್ ಮತ್ತು ರೇಖಾ ವಿಜಯ್ ದಂಪತಿ ಭರಿಸಿದ್ದಾರೆ.

    ಭಜನಾ ಸೇವೆಯಲ್ಲಿ ಪಾಲ್ಗೊಂಡ ತಂಡಗಳ ವಿವರ

    • ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗ ಧರ್ಮಶಾಲೆ ಬಾರ್ಕೂರು.
    • ಶ್ರೀ ಸೋಮಲಿಂಗೇಶ್ವರ ಭಜನಾ ಮಂಡಳಿ ಮೂಡುಕೇರಿ ಬಾರ್ಕೂರು.
    • ಶ್ರೀ ರಾಮಚಂದ್ರ ಭಜನಾ ಮಂಡಳಿ ಸಾಲಿಗ್ರಾಮ.
    • ಶ್ರೀ ಸಂಕೀರ್ತನ ಭಜನಾ ಮಂಡಳಿ ರಾಜೀವನಗರ ಮಣಿಪಾಲ.
    • ಶ್ರೀ ವಿಷ್ಣು ಭಜನ್ಸ್ ಬ್ರಹ್ಮಾವರ.
    • ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಬಾರ್ಕೂರು.
    • ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ ಬಾರ್ಕೂರು.
    • ಶ್ರೀ ಸೋಮಲಿಂಗೇಶ್ವರ ಭಜನಾ ಮಂಡಳಿ ಹಾಲಂಬೇರು.
    • ಶ್ರೀ ರಾಮಾಮೃತ ಭಜನಾ ಮಂಡಳಿ, ಪಡುಕೆರೆ ಕೋಟ.
    • ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಂಗ್ರಪಳ್ಳಿ.

    16 ಗಂಟೆಗಳ ನಿರಂತರ ಭಜನಾ ಸೇವೆಯಲ್ಲಿ ಭಾಗವಹಿಸಿದ ಭಜನಾ ತಂಡಗಳಿಗೆ ಭಜನಾ ಕಾಣಿಕೆಯ ವೆಚ್ಚ ಈ ಕೆಳಗಿನವರು ಭರಿಸಿದ್ದಾರೆ.

    • ಶ್ರೀಮತಿ ವಸಂತಿ ಮತ್ತು ಶ್ರೀ ಕೆ.ಗೋಪಾಲ್ ಕಿನ್ನಿಮೂಲ್ಕಿ.
    • ಶ್ರೀಮತಿ ವಸಂತಿ ಮತ್ತು ಶ್ರೀಎಂ. ಗೋಪಾಲಕೃಷ್ಣ ಬೆಂಗಳೂರು.
    • ಶ್ರೀ ವೇಣುಗೋಪಾಲಕೃಷ್ಣ ಸೊಸೈಟಿ ಬಾರ್ಕೂರು
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು. ಉದ್ಯಾವರ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಡುಪಿ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ತೆಂಕನಿಡಿಯೂರು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬ್ರಹ್ಮಾವರ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬಾರ್ಕೂರು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೋಟ ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೆಮ್ಮಣ್ಣು ವಲಯ.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಬಾರ್ಕೂರು.
    • ಅಧ್ಯಕ್ಷರು ಹಾಗೂ ಸರ್ವಸದಸ್ಯರು ವೇಣುಗೋಪಾಲಕೃಷ್ಣ ಯುವಕ ಸಂಘ ಬಾರ್ಕೂರು.


    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!