ಬೆಂಗಳೂರು: ಯಾವುದೇ ಒಂದು ಸಮಾಜ ಮನೆಮನೆಗೂ ತಲುಪಲು, ಸಮಾಜಬಾಂಧವರಿಗೆ ತಾನಿದ್ದೇನೆ ಎಂದು ದಿನಾಲೂ ನೆನಪಿಸಲು ಸಹಾಯವಾಗುವ ಒಂದು ಸುಲಭದ ಸಾಧನವೆಂದರೆ ಕ್ಯಾಲೆಂಡರ್. ಅಂಥದ್ದೊಂದು ಕ್ಯಾಲೆಂಡರ್ ಮೂಲಕ ಸಮಾಜದವರ ಮನೆಮನೆಗೂ ತಲುಪುವ ಪ್ರಯತ್ನವನ್ನು ಹಾರೋಹಳ್ಳಿ ಗಾಣಿಗರ ಸಂಘ ಮಾಡಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿ ಗಾಣಿಗರ ಸಂಘ ತನ್ನ ಸಮಾಜದವರಿಗೆ ನೀಡಲೆಂದೇ ಮಾಡಿಸಲಾಗಿರುವ ಕ್ಯಾಲೆಂಡರ್ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಮನೆಮನೆಗೂ ತಲುಪಿಸುವ ಕೆಲಸ ನಡೆಯುತ್ತಿದೆ.