ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀಧರ ಕೆ. ಶೆಟ್ಟಿ ಅವರಿಗೆ, ಸಂಸ್ಥೆಯು ‘ಸುರಕ್ಷಾ ಚಾಲಕ’ ಪ್ರಶಸ್ತಿ ನೀಡುವ ಜೊತೆಗೆ ರಜತ ಪದಕವನ್ನೂ ಪ್ರದಾನ ಮಾಡಿ ಗೌರವಿಸಿದೆ.
ಹೊನ್ನಾವರ ತಾಲೂಕಿನ ನವಿಲುಗೋಣು ಗ್ರಾಮದವರಾಗಿರುವ ಶ್ರೀಧರ ಅವರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರವಾರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾರ್ಯದಕ್ಷತೆಯನ್ನು ಗುರುತಿಸಿ ಸಂಸ್ಥೆಯು ಈ ಗೌರವವನ್ನು ನೀಡಿದೆ.