Sunday, September 22, 2024
spot_img
More

    Latest Posts

    ಕಲಾವಿದ ವಿಘ್ನೇಶ್ ಗಾಣಿಗ ರಾಜ್ಯದಲ್ಲಿ ಪ್ರಥಮ, ರಾಷ್ಟ್ರಮಟ್ಟದಲ್ಲೂ ಸ್ಪರ್ಧೆ

    ಬೆಂಗಳೂರು: ಉದಯೋನ್ಮುಖ ಪ್ರತಿಭೆ, ಕಲಾವಿದ ವಿಘ್ನೇಶ್ ಆರ್. ಗಾಣಿಗ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಲ್ಲದೆ, ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿ, ಆ ಸ್ಪರ್ಧೆಯಲ್ಲೂ ಭಾಗವಹಿಸಿ ನಿರೀಕ್ಷೆ ಮೂಡಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ವಿಘ್ನೇಶ್

    ರಾಜ್ಯಮಟ್ಟದ ಕಲೋತ್ಸವ-2020ರ ಪ್ರೌಢಶಾಲಾ ವಿಭಾಗದ ದೃಶ್ಯಕಲೆ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಗಳಿಸಿದ್ದರು. ಮಾತ್ರವಲ್ಲ ಜನವರಿ 16ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ಭಾಗಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ವಿಘ್ನೇಶ್
    ವಿಘ್ನೇಶ್ ತಯಾರಿಸಿರುವ ಕಲಾಕೃತಿ

    ರಾಷ್ಟ್ರಮಟ್ಟದ ಕಲೋತ್ಸವ-2021 ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಇಲಾಖೆಯಲ್ಲಿ ನಡೆದಿದೆ. ಇದರಲ್ಲಿ ರಾಜ್ಯಮಟ್ಟದಲ್ಲಿ ವಿಜೇತರಾಗಿರುವ ಕರ್ನಾಟಕದ ವಿವಿಧ ಜಿಲ್ಲೆಗಳ ಕಲಾವಿದರು ಭಾಗಿಯಾಗಿದ್ದರು.

    ತಾಯಿ ಪೂರ್ಣಿಮಾ ಹಾಗೂ ತಮ್ಮನೊಂದಿಗೆ ವಿಘ್ನೇಶ್

    ಕಿರು ಪರಿಚಯ: ವಿಘ್ನೇಶ್ ಆರ್. ಗಾಣಿಗ ಅವರು ಉಡುಪಿ ಜಿಲ್ಲೆ ಕೊಡವೂರು ಲಕ್ಷ್ಮೀನಗರದ ರಾಘವೇಂದ್ರ ಗಾಣಿಗ ಮತ್ತು ಪೂರ್ಣಿಮಾ ಗಾಣಿಗ ದಂಪತಿಯ ಪುತ್ರ. ಇವರ ತಂದೆ ಅಂಚೆ ಇಲಾಖೆಯ ಉದ್ಯೋಗಿ. ವಿಘ್ನೇಶ್ ಗಾಣಿಗ ಕಲ್ಯಾಣಪುರದ ಹೋಲಿ ರೋಸರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ.

    ವಿಘ್ನೇಶ್ ವಿದ್ಯಾಭ್ಯಾಸ ಮಾಡಿರುವ ಕಲ್ಯಾಣಪುರದ ಹೋಲಿ ರೋಸರಿ ಪ್ರೌಢಶಾಲೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!