ಬೆಂಗಳೂರು: ಉದಯೋನ್ಮುಖ ಪ್ರತಿಭೆ, ಕಲಾವಿದ ವಿಘ್ನೇಶ್ ಆರ್. ಗಾಣಿಗ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಲ್ಲದೆ, ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿ, ಆ ಸ್ಪರ್ಧೆಯಲ್ಲೂ ಭಾಗವಹಿಸಿ ನಿರೀಕ್ಷೆ ಮೂಡಿಸಿದ್ದಾರೆ.
ರಾಜ್ಯಮಟ್ಟದ ಕಲೋತ್ಸವ-2020ರ ಪ್ರೌಢಶಾಲಾ ವಿಭಾಗದ ದೃಶ್ಯಕಲೆ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಗಳಿಸಿದ್ದರು. ಮಾತ್ರವಲ್ಲ ಜನವರಿ 16ರಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ಭಾಗಿಯಾಗಿದ್ದಾರೆ.
ರಾಷ್ಟ್ರಮಟ್ಟದ ಕಲೋತ್ಸವ-2021 ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ರಾಜ್ಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಇಲಾಖೆಯಲ್ಲಿ ನಡೆದಿದೆ. ಇದರಲ್ಲಿ ರಾಜ್ಯಮಟ್ಟದಲ್ಲಿ ವಿಜೇತರಾಗಿರುವ ಕರ್ನಾಟಕದ ವಿವಿಧ ಜಿಲ್ಲೆಗಳ ಕಲಾವಿದರು ಭಾಗಿಯಾಗಿದ್ದರು.
ಕಿರು ಪರಿಚಯ: ವಿಘ್ನೇಶ್ ಆರ್. ಗಾಣಿಗ ಅವರು ಉಡುಪಿ ಜಿಲ್ಲೆ ಕೊಡವೂರು ಲಕ್ಷ್ಮೀನಗರದ ರಾಘವೇಂದ್ರ ಗಾಣಿಗ ಮತ್ತು ಪೂರ್ಣಿಮಾ ಗಾಣಿಗ ದಂಪತಿಯ ಪುತ್ರ. ಇವರ ತಂದೆ ಅಂಚೆ ಇಲಾಖೆಯ ಉದ್ಯೋಗಿ. ವಿಘ್ನೇಶ್ ಗಾಣಿಗ ಕಲ್ಯಾಣಪುರದ ಹೋಲಿ ರೋಸರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ.