ಬೆಂಗಳೂರು: ಶಿರಸಿಯ ಮರಾಠಿಕೊಪ್ಪದ ಕಾರ್ತಿಕ್ ಶೆಟ್ಟಿ ಅವರು 2020ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ತೇರ್ಗಡೆ ಆಗುವ ಮೂಲಕ ಚಾರ್ಟರ್ಡ್ ಅಕೌಂಟೆಂಟ್ ಆಗಿರುತ್ತಾರೆ.
ವಿಶೇಷವೆಂದರೆ ಇವರು ಶಿರಸಿ ತಾಲೂಕಿನಲ್ಲಿ ಗಾಣಿಗ ಸಮಾಜದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಉತ್ತೀರ್ಣರಾಗಿರುವ ಪ್ರಥಮ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು ಬೆಂಗಳೂರಿನಲ್ಲಿದ್ದು ಪರೀಕ್ಷೆ ಬರೆದಿದ್ದರೂ ಪದವಿವರೆಗೂ ಊರಿನಲ್ಲಿಯೇ ವಿದ್ಯಾಭ್ಯಾಸ ಮಾಡಿರುತ್ತಾರೆ.
ಕಾರ್ತಿಕ್ ಶಿರಸಿಯ ಸಹಾಯ ಟ್ರಸ್ಟ್ ಅಧ್ಯಕ್ಷ ಸತೀಶ ಆರ್. ಶೆಟ್ಟಿ ಮತ್ತು ಶಾರದಾ ಎಸ್. ಶೆಟ್ಟಿ ದಂಪತಿಯ ಪುತ್ರ. ಇವರು ಶಿರಸಿಯ ಅವೆಮರಿಯಾ ಪ್ರಾಥಮಿಕ ಶಾಲೆ, ಅವೆಮರಿಯಾ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ಶಿರಸಿಯ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜ್ನಲ್ಲಿ ಬಿ.ಕಾಂ. ಪದವೀಧರರಾಗಿ ಹೊರಹೊಮ್ಮಿರುತ್ತಾರೆ.