ಬೆಂಗಳೂರು: ಭಟ್ಕಳದ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವವು ಫೆಬ್ರವರಿ 21 ಮತ್ತು 22ರಂದು ಶಾಸ್ತ್ರೋಕ್ತವಾಗಿ ನೆರವೇರಲಿದೆ. ವರ್ಧಂತಿ ಉತ್ಸವ ಫೆ.21ರ ಭಾನುವಾರ ಬೆಳಗ್ಗೆ 9ಕ್ಕೆ ನಡೆಯುವ ಗಣೇಶ ಪೂಜೆಯೊಂದಿಗೆ ಆರಂಭವಾಗಲಿದ್ದು, ಫೆ.22ರ ಸೋಮವಾರ ರಾತ್ರಿ ನಡೆಯುವ ತೀರ್ಥ-ಪ್ರಸಾದ ವಿತರಣೆಯೊಂದಿಗೆ ಸಮಾರೋಪಗೊಳ್ಳಲಿದೆ.
ಭಾನುವಾರ ಅಷ್ಟಮೂರ್ತಿ ಪ್ರಾರ್ಥನೆ, ಧ್ವಜಾರೋಹಣ ಗಣಹೋಮ, ಮಹಾಪೂಜೆ, ವಾಸ್ತುಹೋಮ ಇತ್ಯಾದಿ ನಡೆಯಲಿವೆ. ಸೋಮವಾರ ಕಲಶಾಭಿಷೇಕ, ಮಹಾಪೂಜೆ, ರಂಗಪೂಜೆ, ಅನ್ನಸಂತರ್ಪಣೆ ಇತ್ಯಾದಿ ಜರುಗಲಿವೆ.
ಸಾಮೂಹಿಕ ಉಪನಯನ: ಈ ಸಂದರ್ಭದಲ್ಲಿ ಸಮಾಜ ಬಾಂಧವರ ಮಕ್ಕಳಿಗೆ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಉಪನಯನ ಮಾಡಿಸುವವರು ಈ ಬಗ್ಗೆ 2 ಸಾವಿರ ರೂಪಾಯಿ ದೇಣಿಗೆ ನೀಡಿ, ಏಳು ದಿನಗಳ ಮುನ್ನ ಹೆಸರು ನೋಂದಾಯಿಸಿಕೊಳ್ಳಬೇಕು. ಉಪನಯನವು ಫೆ.22ರ ಸೋಮವಾರ ಬೆಳಗ್ಗೆ 8ಕ್ಕೆ ನಡೆಯಲಿದೆ.
ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ, ಮಣ್ಕುಳಿ ಶ್ರೀ ಲಕ್ಷ್ಮೀನಾರಾಯಣ, ಶ್ರೀ ಹನುಮಂತ ದೇವಸ್ಥಾನ, ಸೇವಾ ಟ್ರಸ್ಟ್ ಭಟ್ಕಳ.. ಇವುಗಳ ಸಹಯೋಗದಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಎಂ. ಶೆಟ್ಟಿ, ಮೊಕ್ತೇಸರ ಮಹಾಬಲೇಶ್ವರ ಎನ್. ಶೆಟ್ಟಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 97317 44147 ಸಂಪರ್ಕಿಸಬಹುದು.