Sunday, September 22, 2024
spot_img
More

    Latest Posts

    ಗುರುದತ್ ಗಾಣಿಗ ನಿರ್ದೇಶನದ ನೂತನ ಸಿನಿಮಾ ಶೀರ್ಷಿಕೆ ಜು. 4ಕ್ಕೆ ಅನಾವರಣ

    ಬೆಂಗಳೂರು: ಅತ್ಯಂತ ಕಿರಿಯ ನಿರ್ದೇಶಕರಲ್ಲಿ ಒಬ್ಬರು ಎಂದೇ ಹೆಸರಾಗಿರುವ, ಅದೂ ತನ್ನ ಮೊದಲ ಸಿನಿಮಾದಲ್ಲೇ ರೆಬೆಲ್ ಸ್ಟಾರ್ ಅಂಬರೀಷ್​, ಕಿಚ್ಚ ಸುದೀಪ್, ಸುಹಾಸಿನಿ ಮುಂತಾದವರಿಗೆ ಆ್ಯಕ್ಷನ್​-ಕಟ್ ಹೇಳಿ ಸೈ ಎನಿಸಿಕೊಂಡಿರುವ ನಿರ್ದೇಶಕ ಗುರುದತ್ತ ಗಾಣಿಗ ಈಗಾಗಲೇ ತಮ್ಮ ನಿರ್ದೇಶನದ ಎರಡನೇ ಸಿನಿಮಾಗೆ ಸಿದ್ಧರಾಗಿದ್ದಾರೆ. ವಿಶೇಷವೆಂದರೆ ಅವರು ತಮ್ಮ ನಿರ್ದೇಶನದ ಎರಡನೇ ಚಿತ್ರದ ಶೀರ್ಷಿಕೆಯನ್ನು ಜುಲೈ 4ರಂದು ಬಿಡುಗಡೆ ಮಾಡಲಿದ್ದಾರೆ.

    ಎರಡನೇ ಪ್ರಯತ್ನದಲ್ಲಿ ಡೈನಾಮಿಕ್ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​ ಹಾಗೂ ಅದಿತಿ ಪ್ರಭುದೇವ ಪ್ರಮುಖ ತಾರಾಗಣದಲ್ಲಿರುವ ಸಿನಿಮಾಗೆ ನಿರ್ದೇಶನ ಮಾಡಲಿರುವ ಗುರುದತ್ತ ಗಾಣಿಗ, ಇದೇ ಜುಲೈ 4ರಂದು ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್​ ಲುಕ್ ಅನಾವರಣ ಮಾಡಲಿದ್ದಾರೆ. ಅಂದು ತಮ್ಮ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಅವರ ಜನ್ಮದಿನವಾಗಿರುವುದರಿಂದ ಚಿತ್ರತಂಡ ಅದೇ ದಿನ ಸಿನಿಮಾ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆ. ಸದ್ಯಕ್ಕೆ ಪಿಡಿ35 ಎಂಬ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಈ ಚಿತ್ರದ ಚಟುವಟಿಕೆಗಳು ನಡೆಯುತ್ತಿವೆ.

    ನಿರ್ಮಾಪಕ ಬಿ.ಕುಮಾರ್, ನಾಯಕ ಪ್ರಜ್ವಲ್ ದೇವರಾಜ್ ಜೊತೆ ಗುರುದತ್ ಗಾಣಿಗ

    ಮಾನವ ಕಳ್ಳಸಾಗಣಿಕೆಯ ಕಥೆಯ ಎಳೆಯನ್ನು ಆಧರಿಸಿ ಈ ಸಿನಿಮಾದ ಕಥಾಹಂದರ ಸೃಷ್ಟಿಸಲಾಗಿದ್ದು, ಚಿತ್ರಕಥೆಯು 1999ರ ಕಾಲಘಟ್ಟದಿಂದ 2009ರ ವರೆಗೆ ಸಾಗಲಿದೆ ಎನ್ನಲಾಗಿದೆ. ಬೆಂಗಳೂರು ‌ಕುಮಾರ್ (ಕುಮಾರ್ ಬಿ.) ಈ ಸಿನಿಮಾದ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಮಾಸ್ತಿ ಅವರ ಸಂಭಾಷಣೆ ಇರಲಿದೆ.

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
    ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್​ಆ್ಯಪ್​ ಮಾಡಿ.

    ವಿಶ್ವ ಯೋಗ ದಿನದಂದೇ ನಿಮಗಿದೋ ಕೇಳುವ ಯೋಗ; ಕಣಗಾಲರ ‘ಮಾನಸ ಸರೋವರ’ ಕೇಳಿಸಲಿದ್ದಾರೆ ಡಾವೆಂಕಿ

    ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!