ಬೆಂಗಳೂರು: ಎಮ್ಟೆಕ್ನಲ್ಲಿ ಎರಡನೇ ರ್ಯಾಂಕ್ ಜೊತೆಗೆ ಚಿನ್ನದ ಪದಕವನ್ನೂ ಗಳಿಸಿರುವ ವಿ.ಎಸ್.ತೃಷಾ, ಇದೀಗ ಐಎಎಸ್ ಪರೀಕ್ಷೆಗೆ ಅಭ್ಯಾಸ ನಡೆಸುವ ಮೂಲಕ ಮತ್ತೊಂದು ಸಾಧನೆಗೆ ಸಜ್ಜಾಗುತ್ತಿದ್ದಾರೆ.
ತೃಷಾ ಚಿಕ್ಕಬಳ್ಳಾಪುರ ನಿವಾಸಿ ಟಿ. ವೆಂಕಟೇಶ್ ಹಾಗೂ ಮಂಜುಳಾ ದಂಪತಿಯ ಪುತ್ರಿ. ವೆಂಕಟೇಶ್ ಹಾಗೂ ಮಂಜುಳಾ ಇಬ್ಬರೂ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೃಷಾ ಮತ್ತಷ್ಟು ಕನಸುಗಳನ್ನು ಇರಿಸಿಕೊಂಡು ಅದಕ್ಕಾಗಿ ಅಭ್ಯಾಸನಿರತರಾಗಿದ್ದಾರೆ.
ಶ್ರೀಗಾಣಿಗ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ಎಸ್ಇಜಿಸಿಟಿ) ತೃಷಾ ಅವರ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದೆ. ಮಾತ್ರವಲ್ಲ ತೃಷಾಗೆ ಎಸ್ಇಜಿಸಿಟಿ ವಿದ್ಯಾರ್ಥಿವೇತನ ಕೂಡ ಒದಗಿಸಿದ್ದು, ಕೆಎಎಸ್-ಐಎಎಸ್ಗೆ ತಯಾರಿ ನಡೆಸುತ್ತಿದ್ದಾರೆ.
ಸಂಬಂಧಿತ ಸುದ್ದಿ: ಎಸ್ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್ಸಿ/ಕೆಪಿಎಸ್ಸಿ ತರಬೇತಿ
ಸಂಬಂಧಿತ ಸುದ್ದಿ: ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಗಾಣಿಗ ಬಾಂಧವರಿಗಿಲ್ಲಿದೆ ಅವಕಾಶ..
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಆನ್ಲೈನ್ ಸ್ಪರ್ಧೆ