Sunday, September 22, 2024
spot_img
More

    Latest Posts

    ಎಮ್​ಟೆಕ್​ನಲ್ಲಿ ಎರಡನೇ ರ‍್ಯಾಂಕ್​, ಚಿನ್ನದ ಪದಕ; ಈಗ ಐಎಎಸ್​ಗೆ ತಯಾರಿ..

    ಬೆಂಗಳೂರು: ಎಮ್​ಟೆಕ್​ನಲ್ಲಿ ಎರಡನೇ ರ‍್ಯಾಂಕ್ ಜೊತೆಗೆ ಚಿನ್ನದ ಪದಕವನ್ನೂ ಗಳಿಸಿರುವ ವಿ.ಎಸ್.ತೃಷಾ, ಇದೀಗ ಐಎಎಸ್​ ಪರೀಕ್ಷೆಗೆ ಅಭ್ಯಾಸ ನಡೆಸುವ ಮೂಲಕ ಮತ್ತೊಂದು ಸಾಧನೆಗೆ ಸಜ್ಜಾಗುತ್ತಿದ್ದಾರೆ.

    ತೃಷಾ ಚಿಕ್ಕಬಳ್ಳಾಪುರ ನಿವಾಸಿ ಟಿ. ವೆಂಕಟೇಶ್​ ಹಾಗೂ ಮಂಜುಳಾ ದಂಪತಿಯ ಪುತ್ರಿ. ವೆಂಕಟೇಶ್ ಹಾಗೂ ಮಂಜುಳಾ ಇಬ್ಬರೂ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೃಷಾ ಮತ್ತಷ್ಟು ಕನಸುಗಳನ್ನು ಇರಿಸಿಕೊಂಡು ಅದಕ್ಕಾಗಿ ಅಭ್ಯಾಸನಿರತರಾಗಿದ್ದಾರೆ.

    ಶ್ರೀಗಾಣಿಗ ಎಜುಕೇಷನಲ್​ ಆ್ಯಂಡ್ ಚಾರಿಟಬಲ್ ಟ್ರಸ್ಟ್ (ಎಸ್​ಇಜಿಸಿಟಿ) ತೃಷಾ ಅವರ ಶೈಕ್ಷಣಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದೆ. ಮಾತ್ರವಲ್ಲ ತೃಷಾಗೆ ಎಸ್​ಇಜಿಸಿಟಿ ವಿದ್ಯಾರ್ಥಿವೇತನ ಕೂಡ ಒದಗಿಸಿದ್ದು, ಕೆಎಎಸ್-ಐಎಎಸ್​ಗೆ ತಯಾರಿ ನಡೆಸುತ್ತಿದ್ದಾರೆ.

    ಸಂಬಂಧಿತ ಸುದ್ದಿ: ಎಸ್​ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್​ಸಿ/ಕೆಪಿಎಸ್​ಸಿ ತರಬೇತಿ

    ಸಂಬಂಧಿತ ಸುದ್ದಿ: ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಗಾಣಿಗ ಬಾಂಧವರಿಗಿಲ್ಲಿದೆ ಅವಕಾಶ..

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಆನ್‌ಲೈನ್ ಸ್ಪರ್ಧೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!