Sunday, September 22, 2024
spot_img
More

    Latest Posts

    ಕೊಲೆಗೀಡಾದ ಯಡಮೊಗೆ ಉದಯ ಗಾಣಿಗ ಕುಟುಂಬಕ್ಕೆ ಧನಸಹಾಯ

    ಬೆಂಗಳೂರು: ಉಡುಪಿ ಜಿಲ್ಲೆಯ ಹೊಸಂಗಡಿ ಸಮೀಪದ ಯಡಮೊಗೆಯಲ್ಲಿ ಕೆಲವು ತಿಂಗಳ ಹಿಂದೆ ಕೊಲೆಗೀಡಾಗಿರುವ ಯಡಮೊಗೆ ನಿವಾಸಿ ಉದಯ ಗಾಣಿಗ ಅವರ ಕುಟುಂಬಕ್ಕೆ ಕುಂದಾಪುರ ತಾಲೂಕು ಆರೋಗ್ಯ ಸಹಕಾರಿ ಸಂಘ ಧನಸಹಾಯವನ್ನು ನೀಡಿದೆ.

    ಪತಿಯ ಕೊಲೆಯಿಂದ ಸಂಕಷ್ಟಕ್ಕೀಡಾಗಿರುವ ಪತ್ನಿ ಜ್ಯೋತಿ ಮತ್ತು ಕುಟುಂಬಕ್ಕೆ ಅವರ ಮನೆಯಲ್ಲಿ ಆಗಸ್ಟ್​ 20ರ ಶುಕ್ರವಾರದಂದು ಭೇಟಿಯಾಗಿ ಸಾಂತ್ವನ ಹೇಳಿದ ಸಂಘದ ಪದಾಧಿಕಾರಿಗಳು ಹತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ಹಸ್ತಾಂತರಿಸಿ, ಅಭಯ ಸೂಚಿಸಿದರು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್. ವಾಸುದೇವ ಯಡಿಯಾಳ, ಉಪಾಧ್ಯಕ್ಷ ನಾಗಪ್ಪ ಕೊಠಾರಿ, ನಿರ್ದೇಶಕರಾದ ರವಿ ಗಾಣಿಗ ಆಜ್ರಿ, ನಾಗಪ್ಪ ಪೂಜಾರಿ, ಅಂಬಿಕಾ ಮಯ್ಯ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಶಂಕರನಾರಾಯಣ ಯಡಿಯಾಳ ಹಾಗೂ ಸ್ಥಳೀಯರಾದ ಗುಂಡು ಶೆಟ್ಟಿ, ಸುನೀಲ್ ಯಡಿಯಾಳ ಮುಂತಾದವರು ಉಪಸ್ಥಿತರಿದ್ದರು.

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ: ಡಿಕೆಶಿ ಬಂದರು, ಲಕ್ಷ್ಯ ಕೊಟ್ಟರು, ಲಕ್ಷವನ್ನೂ ಕೊಟ್ಟರು…

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಕುಂದಾಪುರ ಶಾಸಕರಿಗೆ ಮನವಿ

    ಸಂಬಂಧಿತ ಸುದ್ದಿ: ಉದಯ ಗಾಣಿಗ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಿ; ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!