Saturday, September 21, 2024
spot_img
More

    Latest Posts

    ಗಾಣಿಗ ಗುರುಪೀಠದ ಶ್ರೀಜಯಬಸವಕುಮಾರ ಸ್ವಾಮೀಜಿಯವರಿಂದ ಶ್ರಾವಣ ಶಿವಾನುಭವ ಗೋಷ್ಠಿ

    ಬೆಂಗಳೂರು: ವಿಜಯಪುರ ಜಿಲ್ಲೆ ವನಶ್ರೀ ಮಠದ ಗಾಣಿಗ ಗುರುಪೀಠದ ಶ್ರೀಜಯಬಸವಕುಮಾರ ಸ್ವಾಮೀಜಿಯವರು ಶ್ರಾವಣ ಮಾಸದ ಪ್ರಯುಕ್ತ ಶಿವಾನುಭವ ಗೋಷ್ಠಿ ನಡೆಸಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

    ವಿಜಯಪುರದ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಹಾಗೂ ಮಲಘಾಣ ಗ್ರಾಮಗಳಲ್ಲಿ ಈ ಶಿವಾನುಭವ ಗೋಷ್ಠಿ ನಡೆದಿದ್ದು, ಎರಡೂ ಕಡೆ ಸ್ವಾಮೀಜಿಯವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಭಕ್ತರು ಗೋಷ್ಠಿಯಲ್ಲಿ ಭಾಗವಹಿಸಿ ಶಿವಾನುಗ್ರಹ ಹಾಗೂ ಸ್ವಾಮೀಜಿಯವರ ಆಶೀರ್ವಾದಕ್ಕೆ ಪಾತ್ರರಾದರು.

    ಶ್ರೀಜಯಬಸವಕುಮಾರ ಸ್ವಾಮೀಜಿಯವರಿಗೆ ಅದ್ದೂರಿ ಸ್ವಾಗತ

    ಚಿಕ್ಕ ಸಿಂದಗಿಯಲ್ಲಿ ಆಗಸ್ಟ್ 21ರಂದು ನಡೆದ ಶಿವಾನುಭವ ಗೋಷ್ಠಿಗೆ ಸ್ವಾಮೀಜಿಯವರನ್ನು ಸಾರೋಟಿನಲ್ಲಿ ಕೂರಿಸಿ, ಕುಂಭಮೇಳ ಸಹಿತವಾಗಿ ಸ್ವಾಗತಿಸಲಾಯಿತು. ಸಿಂದಗಿ ತಾಲೂಕು ಗಾಣಿಗ ಸಂಘದ ಅಧ್ಯಕ್ಷರು ಮಲ್ಲಣ್ಣ ಮನಗೂಳಿ, ಜಿಲ್ಲಾ ಯುವ ಅಧ್ಯಕ್ಷ ನಿಂಗರಾಜ್ ಬಗಲಿ, ಶ್ರೀಶೈಲ ಗೌಡ ಬಿರಾದರ್, ಚಿಕ್ಕಸಿಂದಗಿ ಗ್ರಾಮದ ಗಾಣಿಗ ಸಮಾಜದ ಅಧ್ಯಕ್ಷ ಗೊಲ್ಲಾಳಪ್ಪಗೌಡ ಬಿರಾದಾರ್ ಮತ್ತು ಬಸಲಿಂಗಗೌಡ ಬಿರಾದಾರ್, ಶಿವಶರಣ ರಾಮಗೊಂಡ, ಅರವಿಂದ ಗೌಡ ರಾಮಗೊಂಡ ಸೇರಿ ಗಾಣಿಗ ಸಮಾಜದ ತಾಲೂಕು ಮತ್ತು ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.

    ಚಿಕ್ಕಸಿಂದಗಿಯಲ್ಲಿ ನೆರೆದಿದ್ದ ಭಕ್ತರಿಂದ ಸ್ವಾಮೀಜಿಗೆ ಸ್ವಾಗತ

    ಸಿಂದಗಿ ತಾಲೂಕ ಮಲಘಾಣ ಗ್ರಾಮದಲ್ಲಿ ಆಗಸ್ಟ್ 22ರಂದು ನಡೆದ ಶಿವಾನುಭವ ಗೋಷ್ಠಿಯಲ್ಲೂ ಗಾಣಿಗ ಗುರುಪೀಠದ ಶ್ರೀ ಜಯಬಸವಕುಮಾರ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

    ಮಲಘಾಣದಲ್ಲಿ ಶಿವಾನುಭವ ಗೋಷ್ಠಿಗೆ ನೆರೆದ ಭಕ್ತರು

    ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಳದಲ್ಲಿ ವರಮಹಾಲಕ್ಷ್ಮೀಪೂಜೆ, ಋಗುಪಾಕರ್ಮ ಆಚರಣೆ

    ಸಂಬಂಧಿತ ಸುದ್ದಿ: ಶ್ರಾವಣ ಮಾಸ ಪ್ರಯುಕ್ತ ಗಾಣಿಗ ಗುರುಪೀಠದಲ್ಲಿ ಜಯಬಸವಕುಮಾರ ಶ್ರೀಗಳಿಂದ ಪ್ರವಚನ

    ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!