ಬೆಂಗಳೂರು: ಗಾಣಿಗ ಸಮುದಾಯದವರೇ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸಮುದಾಯದವರು ಮರೆಯಬೇಡಿ ಎಂದು ಕೋರಿಕೊಂಡಿರುವ ರಾಜಕೀಯ ಮುಖಂಡರೊಬ್ಬರು, ‘ಗಾಣಿಗರನ್ನು ರಕ್ಷಿಸಿ’ ಎಂದೂ ಪ್ರಧಾನಿ ನರೇಂದ್ರ ಮೋದಿಯವರ ಮೊರೆ ಹೋಗಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆರೋಗ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಿಂಗನಮಾಲ ಸುಮನ್ ಮೋದಿ ಅವರು ಇಂಥದ್ದೊಂದು ಮನವಿ ಮಾಡಿಕೊಂಡಿದ್ದಾರೆ. ‘ನಮಗೆ ಜನ್ಮ ನೀಡಿದ ನಮ್ಮ ಜಾತಿಯ ಋಣವನ್ನು ನಾವು ತೀರಿಸಬೇಕು. ಮೋದಿಯವರನ್ನು ಮರೆಯಬೇಡಿ’ ಎಂಬುದಾಗಿ ಅವರು ತಮ್ಮ ಸಮುದಾಯದ ಮಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹಾಗೆಯೇ ತೇಲಿ ಜನಾಂಗ ಅರ್ಥಾತ್ ಗಾಣಿಗ ಸಮುದಾಯದವರನ್ನು ರಕ್ಷಿಸಿ ಎಂಬ ಮನವಿ ಮೂಲಕ ಆ ನಿಟ್ಟಿನಲ್ಲಿ ಪ್ರಧಾನಿಯವರ ಗಮನ ಸೆಳೆಯಲು ಯತ್ನಿಸಿದ್ದಾರೆ. ‘ಜಗತ್ತಿಗೇ ಬೆಳಕು ಕೊಟ್ಟ ಗಾಣಿಗರು ಇಂದು ಕತ್ತಲೆಯಲ್ಲಿ ಇದ್ದಾರೆ. ಕಲಬೆರಕೆ ಎಣ್ಣೆಯಿಂದಾಗಿ ಅವರ ಕುಲಕಸುಬು ಕಣ್ಮರೆಯಾಗುತ್ತಿದೆ’ ಎಂದು ಹೇಳಿರುವ ಅವರು, ‘ಪ್ರಧಾನಿಯವರೇ ಗಾಣಿಗರನ್ನು ರಕ್ಷಿಸಿ’ ಎಂದು ಕೋರಿಕೊಂಡಿದ್ದಾರೆ.
ಸಂಬಂಧಿತ ಸುದ್ದಿ: ಅಖಿಲ ಭಾರತ ತೈಲಿಕ್ ಸಾಹು ಮಹಾಸಭಾ ಅಧ್ಯಕ್ಷೆ ಡಾ.ಮಮತಾ ಸಾಹುಗೆ ಸನ್ಮಾನ
ಸಂಬಂಧಿತ ಸುದ್ದಿ: ಬಿಹಾರ ರಾಜ್ಯ ಜೆಡಿಯು ಕಾರ್ಯದರ್ಶಿ ಆಗಿ ಶಕುಂತಲಾ ಗುಪ್ತ ನೇಮಕ
ಸಂಬಂಧಿತ ಸುದ್ದಿ: ಅಭಿನಯದ ಅಲೆಗಳಲ್ಲಿ ‘ತೇಲಿ’ಸಿದ್ದ ನಟ ಶನಿಮಹದೇವಪ್ಪ ಇನ್ನು ಬರೀ ನೆನಪು