ಬೆಂಗಳೂರು: ಮಂಗಳೂರು ಪಡುಬದಿನಡಿ ಶ್ರೀ ಅರಸು ಮುಂಡಿತ್ತಾಯ ಧೂಮಾವತಿ ದೈವಸ್ಥಾನಕ್ಕೆ ಸಂಬಂಧಿಸಿದ, ನೂತನವಾಗಿ ನಿರ್ಮಾಣಗೊಂಡಿರುವ ಗಾಣದ ಕೊಟ್ಯದ ಪ್ರವೇಶೋತ್ಸವ ಇಂದು ಅದ್ಧೂರಿಯಾಗಿ ನೆರವೇರಿದೆ.
ಬೆಳಗ್ಗೆ 10.30ಕ್ಕೆ ಬೊಳ್ಮಾರಗುತ್ತು ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಈ ಗಾಣದ ಕೊಟ್ಯದ ಪ್ರವೇಶೋತ್ಸವ ಜರುಗಿದೆ. ನೀರುಮಾರ್ಗ ಬೊಂಡಂತಿಲದ ಪಡು ಗಾಣದಕೊಟ್ಯದಲ್ಲಿ ನಡೆದ ಈ ಗಾಣ ಪ್ರತಿಷ್ಠೆ ಸಮಾರಂಭದಲ್ಲಿ ಗಾಣಿಗ ಸಮುದಾಯದವರಲ್ಲದೆ ಸುತ್ತಮುತ್ತಲ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶನಿಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಶನಿಪೂಜೆ ಬಳಿಕ ಗಾಣದ ಕುತ್ತಿಗೆ ತೆಂಗಿನೆಣ್ಣೆ ಹಾಕುವ ಅವಕಾಶ ಭಕ್ತಾದಿಗಳಿಗೆ ಕಲ್ಪಿಸಲಾಗಿದೆ ಎಂದು ಆಯೋಜಕರಾಗಿರುವ ಆಡಳಿತ ಮಂಡಳಿ ಹಾಗೂ ಪಡುಬದಿನಡಿ ಗಾಣದ ಕೊಟ್ಯದ ಗಾಣಿಗ ಸಂಸಾರದವರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಕ್ಯಾಪ್ಟನ್ ಭರತ್ ಯೋಗೇಂದ್ರ: ಆರ್ಮಿ ಸೆಲೆಕ್ಷನ್ನಲ್ಲಿ ಪ್ರಥಮ ಸ್ಥಾನ, ಬೆಳ್ಳಿ ಪದಕ!
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ನೂತನ ಸಂಪುಟ ರಚನೆ ಬೆನ್ನಿಗೇ ಮತ್ತಷ್ಟು ಕ್ರಿಯಾಶೀಲರಾದ್ರು ಶಾಸಕ ದಿನಕರ ಶೆಟ್ಟಿ
ಸಂಬಂಧಿತ ಸುದ್ದಿ: ಎಸ್ಜಿಇಸಿಟಿಯಿಂದ ಮತ್ತೊಂದು ಮಹತ್ಕಾರ್ಯ; ಗಾಣಿಗ ಸಮಾಜದ 19 ಮಹತ್ವಾಕಾಂಕ್ಷಿಗಳಿಗೆ ಯುಪಿಎಸ್ಸಿ/ಕೆಪಿಎಸ್ಸಿ ತರಬೇತಿ