Saturday, September 21, 2024
spot_img
More

    Latest Posts

    ಪಾಲಿಕೆ ಚುನಾವಣೆಯಲ್ಲಿ ಗೆದ್ದ ಗಾಣಿಗ ಸಮಾಜದ ಮುಖಂಡರನ್ನು ಭೇಟಿಯಾದ ಸ್ವಾಮೀಜಿ

    ಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗಾಣಿಗ ಸಮುದಾಯದ ಇಬ್ಬರು ಗೆಲುವು ಕಂಡಿದ್ದು, ಸಮಾಜಕ್ಕೆ ಮತ್ತಷ್ಟು ಹೆಮ್ಮೆ ತಂದುಕೊಟ್ಟಿದ್ದಾರೆ.

    ಹೀಗೆ ಗೆಲುವು ಕಂಡು ಕಾರ್ಪೋರೇಟರ್‌ ಆಗಿರುವ ಗಾಣಿಗ ಸಮಾಜದವರ ಮನೆಗೆ ಸಮುದಾಯದ ಸ್ವಾಮೀಜಿವೊಬ್ಬರು ತೆರಳಿ, ಅಭಿನಂದನೆಗಳನ್ನು ಸಲ್ಲಿಸಿದ್ದಲ್ಲದೆ ಮುಂದಿನ ಎಲ್ಲ ಕಾರ್ಯಗಳು ಸುಗಮವಾಗಿ ನೆರವೇರಲಿ ಎಂದು ಶುಭ ಹಾರೈಸಿದ್ದಾರೆ.

    ಶ್ರೀ ಕಲ್ಲಿನಾಥ ಸ್ವಾಮೀಜಿಯವರನ್ನು ತಮ್ಮ ಮನೆಯಲ್ಲಿ ಸನ್ಮಾನಿಸಿದ ಕಾರ್ಪೋರೇಟರ್‌ ತಿಪ್ಪಣ್ಣ ಮಜ್ಜಗಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗಾಣಿಗ ಸಮುದಾಯದವರಾದ ತಿಪ್ಪಣ್ಣ ಮಜ್ಜಗಿ ಅವರು ವಾರ್ಡ್‌ ನಂ-೩೮ರಲ್ಲಿ ಹಾಗೂ ಸುಮಿತ್ರಾ ಗುಂಜಳ ಅವರು ವಾರ್ಡ್‌ ನಂ-೭೨ರಲ್ಲಿ ಗೆಲುವು ಕಂಡಿದ್ದು, ಅವರ ಮನೆಗೆ ವಿಜಯಪುರ ಜಿಲ್ಲೆ ಕೊಲ್ಹಾರ ದಿಗಂಬರೇಶ್ವರ ಸಂಸ್ಥಾನ ಮಠದ ಶ್ರೀಕಲ್ಲಿನಾಥ ಸ್ವಾಮೀಜಿಯವರು ತೆರಳಿ ಅಭಿನಂದಿಸಿ ಆಶೀರ್ವದಿಸಿದ್ದಾರೆ.

    ಕಾರ್ಪೋರೇಟರ್‌ ಸುಮಿತ್ರಾ ಗುಂಜಳ ಅವರ ಮನೆಗೆ ತೆರಳಿ ಆಶೀರ್ವದಿಸಿದ ಶ್ರೀಕಲ್ಲಿನಾಥ ಸ್ವಾಮೀಜಿ
    ನೂತನ ಕಾರ್ಪೋರೇಟರ್‌ ತಿಪ್ಪಣ್ಣ ಮಜ್ಜಗಿ ಅವರ ಕುಟುಂಬದೊಂದಿಗೆ ಶ್ರೀಕಲ್ಲಿನಾಥ ಸ್ವಾಮೀಜಿ.

    ಸಂಬಂಧಿತ ಸುದ್ದಿ: ‌ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ವಿದ್ಯಾರ್ಥಿಗಳಿಗಾಗಿ ಬೃಹತ್‌ ಹಾಸ್ಟೆಲ್‌ ನಿರ್ಮಾಣ ಭರವಸೆ

    ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!